ಉಡುಪಿ ರಾಷ್ಟ್ರೀಯ ಹೆದ್ದಾರಿ ಕರಾವಳಿ ಜಂಕ್ಷನ್ ಬಳಿ ನಗರಸಭೆಯ ಅನುದಾನದಲ್ಲಿ ಶಾರದಾ ವೆಟ್ ವೆಲ್ ನಿಂದ ನಿಟ್ಟೂರು ಎಸ್ ಟಿಪಿಗೆ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ಗೋಸ್ಕರ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಂ ಅಂಚನ್, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಅಶೋಕ್ ನಾಯ್ಕ, ಮಂಜುನಾಥ್ ಮಣಿಪಾಲ, ಎಂಜಿನಿಯರ್ ಮತ್ತು ಗುತ್ತಿಗೆದಾರರು ಹಾಜರಿದ್ದರು.