ಅಸಹಾಯಕ ವೃದ್ಧ ಪತ್ತೆ – ಆಶ್ರಮಕ್ಕೆ ದಾಖಲು

ಉಡುಪಿ: ಹೂಡೆ – ಬೆಂಗ್ರೆಯ ಬೊಬ್ಬರ್ಯ ಗುಡಿ ಹತ್ತಿರ ಅಸಹಾಯಕ ಪರಿಸ್ಥಿತಿಯಲ್ಲಿದ್ದ ವೃದ್ಧರನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಗಣೇಶ್ ನಾಯ್ಕ್ ರಕ್ಷಿಸಿ ಮಣಿಪಾಲದ ಸರಳಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿರುತ್ತಾರೆ. 
ವೃದ್ದರು ತನ್ನ ಹೆಸರು ಮಣಿ, ಊರು ಕೇರಳ ಎನ್ನುತ್ತಿದ್ದು, ಮಲೆಯಾಳಿ ಭಾಷೆ ಮಾತನಾಡು ತ್ತಾರೆ. ವೃದ್ಧರ ವಾರಸುದಾರರು ಯಾರಾದರು ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯ ವಾಣಿ ಕೇಂದ್ರ ದೂ.ಸಂಖ್ಯೆ: 0820 – 2526394 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply