ಉಡುಪಿ ಜಿಲ್ಲಾ ಬೆನ್ನು ಮೂಳೆ ಮುರಿತಕ್ಕೊಳಗಾದವರ ಸರ್ವೆಗೆ ಚಾಲನೆ – ವಿಜಯ್ ಕೊಡವೂರು

ಉಡುಪಿ ಜಿಲ್ಲೆಯಲ್ಲಿ 80 ರಿಂದ 90 ಜನ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರನ್ನು ಗುರುತಿಸುವ ಕಾರ್ಯ ಸರಕಾರ ಮತ್ತು ಸೇವಾ ಭಾರತೀಯ ಅಂಗ ಸಂಸ್ಥೆಯಾಗಿರುವ ಸೇವಾದಾಮ ಹೆರ್ಗ ಉಡುಪಿ ಜಿಲ್ಲೆ ಇದರ ವತಿಯಿಂದ ನಡೆಯುತ್ತಿದೆ. ಸರಕಾರದ ವತಿಯಿಂದ ಸಿಗುವಂತಹ ಸವಲತ್ತುಗಳು ಮತ್ತು ಔಷಧಿ ಕಿಟ್, ಮೆಡಿಕಲ್ ಕಿಟ್ ಮತ್ತು ಪ್ರತಿ ತಿಂಗಳಿಗೊಮ್ಮೆ ಅವರ ಮನೆ ಮನೆಗೆ ತೆರಳಿ ಅವರಿಗೆ ಬೇಕಾಗುವಂತ ಚಿಕಿತ್ಸೆ ಮತ್ತು ಔಷಧಿಗಳ ಬೇಡಿಕೆಗೆ ಸ್ಪಂದಿಸಿ ಉಡುಪಿ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಇಓ ಇದಕ್ಕೆ ಮನವಿಗೆ ಸ್ಪಂದಿಸಿ ಪ್ರತಿ ತಿಂಗಳು 108 ಆಂಬುಲೆನ್ಸ್ ಮುಖಾಂತರ ಆರೋಗ್ಯ ಅಧಿಕಾರಿಯೊಂದಿಗೆ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಕಾರ್ಯಕ್ಕೆ ನಾಗಭೂಷಣ್ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮತ್ತು ಸೇವಾಧಾಮದ ನಿರ್ದೇಶಕರು ವಿಜಯ್ ಕೊಡವೂರು ಮಾತನಾಡಿ ದಿವ್ಯಾಂಗರಲ್ಲಿ ಬೆನ್ನುಮೂಳೆ ಮುರಿತಕ್ಕೆ ಒಳಗಾದವರು ಡುಸ್ತಿಯಲ್ಲಿ ಇರುವವರು, ಇವರ ಬೇಕು ಬೇಡಗಳಿಗೆ ದ್ವನಿಯಾಗುವಂತ ಸಂಸ್ಥೆ ಸೇವಾ ಧಾಮ, ಪ್ರತೀ ತಿಂಗಳು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆಯಲ್ಲಿ ಸೇವಾ ಧಾಮದ ಕಾರ್ಯಕರ್ತರು ಭಾಗವಹಿಸಿ ಅವರ ಬೇಡಿಕೆಗಳನ್ನು ಪೂರೈಸುವ ಪ್ರಯತ್ನ ಮಾಡುವ ಕಾರ್ಯ ನಡೆಯುತ್ತಿದೆ.ಅದೇ ರೀತಿ ನಿಮ್ಮ ಮನೆ,ಪರಿಸರದಲ್ಲಿ ಅಥವಾ ನಿಮಗೆ ಪರಿಚಯದಲ್ಲಿ ಯಾರಾದರೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರು ಇದಲ್ಲಿ ತಿಳಿಸಿ, ಸೇವಾ ಧಾಮದ ವತಿಯಿಂದ ಅವರಿಗೆ ಸಹಾಯ ಮಾಡುವ ಕಾರ್ಯವನ್ನು ಮಾಡುತ್ತೇವೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಡುಪಿ DHO ಡಾಕ್ಟರ್ ನಾಗಭೂಷಣ್ ಉಡುಪ, ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು,ಸೇವಾ ಧಾಮದ ಸದಸ್ಯರಾದ ಸಂಪತ್ ಭಟ್,ವಿಷ್ಣು ಭಟ್,ಅಶೋಕ್ ಶೆಟ್ಟಿಗಾರ್ ಕೊಡವೂರು , ಪ್ರಭಾತ್ ಕೊಡವೂರು,ಅಶೋಕ್ ಕಾರ್ಕಳ,ವಿಜಯ್ ಕೊಡವೂರು,ಉಡುಪಿ ಜಿಲ್ಲಾ ಆಂಬುಲೆನ್ಸ್ ಅಧಿಕಾರಿ ಮಡಿವಾಳ,ಸುದರ್ಶನ್ ಕೊಡವೂರು, ಮನು ಸೇವಾಧಮ,ಮತ್ತು ಆರೋಗ್ಯ ಅಧಿಕಾರಿ ಉಪಸ್ಥಿತರಿದ್ದರು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply