ಸ್ವಾವಲಂಬಿ ಗ್ರಾಮದ ಸಂಕಲ್ಪ – ಕೆ ವಿಜಯ್ ಕೊಡವೂರು

ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮವು ದಿನಾಂಕ 02-06-2022 ರಂದು ಸಾಧನಾ ಸಭಾಭವನ ಮರವಂತೆಯಲ್ಲಿ ನಡೆಯಿತು.

ವಿದ್ಯಾವಂತರು ನಿರೋದ್ಯೋಗಿಗಳು ಆದಲ್ಲಿ ಕುಡಿತಾ,ಡ್ರಗ್ಸ್, ದುಷ್ಟತಗಳು ಹೆಚ್ಚಾಗಿ ಕಳ್ಳತನ ದರೋಡೆ ಲೂಟಿ ಮಾಡಿ ಸಮಾಜವನ್ನು ಕೆಡಿಸುತ್ತಾರೆ ಅದಕ್ಕಾಗಿ ಅವರಿಗೆ ಕೇಂದ್ರ ಸರಕಾರದ ಯೋಜನೆಗಳನ್ನು ತಿಳಿಸಿ ಸ್ವಂತ ಉದ್ಯೋಗ ಮಾಡುವಂತೆ ಅದಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಿದರೆ ಅವರು ತಮ್ಮ ಸ್ವಂತ ಕಾಲಿನಲ್ಲಿ ನಿಂತು ಬೆಳೆದು ಸಮಾಜದ ಕಷ್ಟಗಳಿಗೆ ಸ್ಪಂದನೆ ನೀಡುತ್ತಾರೆ.

ಕೆಮಿಕಲ್ ಮಿಶ್ರಿತ ಆಹಾರದಿಂದ ಕ್ಯಾನ್ಸರ್ ಅಂತಹ ಬೀಕರ ರೋಗದಿಂದ ಅನಾರೋಗ್ಯ ಪೀಡಿತ ಸಮಾಜವನ್ನು ನಾವು ರಕ್ಷಿಸಲು ಸಾವಯವ ಕೃಷಿಯನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ, ಶಾಲಾ-ಕಾಲೇಜುಗಳಲ್ಲಿ ಸಾವಯವ ಕೃಷಿಯ ಬಗ್ಗೆ ಜಾಗೃತಿ ನೀಡುವ ಕಾರ್ಯ ನಮ್ಮದಾದಾಗ ಮಾತ್ರ ನಮ್ಮ ಗ್ರಾಮ ಸ್ವಾವಲಂಬಿಯಾಗಲು ಸಾಧ್ಯವಿದೆ ಎಂದು ಮರವಂತೆಯ ಸಾಧನಾ ಸಭಾಭವನದಲ್ಲಿ ನಡೆದ ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ ಸ್ವಾವಲಂಬಿ ಗ್ರಾಮ ಬೈಠಕ್ ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯ ಆಗಿರುವ ಕೆ ವಿಜಯ್ ಕೊಡವೂರು ತಿಳಿಸಿದರು.

ಬಂದಿರುವ ಮಹಿಳೆಯರು ಈ ಕಾರ್ಯವನ್ನು ಮೆಚ್ಚಿ ನಾವು ಮುಂದಿನ ದಿನಗಳಲ್ಲಿ ಮನೆಯಲ್ಲಿ ಸ್ವಂತ ಉದ್ಯೋಗವನ್ನು ಮಾಡುತ್ತೇವೆ ಎಂದರು. ಈ ಮೂಲಕ ಸ್ವಾವಲಂಬಿ ಗ್ರಾಮಕ್ಕೆ ಸಂಕಲ್ಪ ಮಾಡುವ ಪ್ರಯತ್ನ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಡೆಯಿತು.

ಈ ಸಂದರ್ಬದಲ್ಲಿ ಜಿಲ್ಲಾ ಸಹ ಸಮನ್ವಯ ಆಗಿರುವ ಶ್ರೀ ಪ್ರಸನ್ನ ಉಪ್ಪುಂದ, ಮಾಜಿ ಪಂಚಾಯತ್ ಅಧ್ಯಕ್ಷರಾದ ಅನಿತಾ ಆರ್ ಕೆ ,ಮಂಜುನಾಥ್ ಮರವಂತೆ, ಪ್ರಿಯ ದರ್ಶಿನಿ, ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply