ಕೇಂದ್ರ ಸರಕಾರದ ಯೋಜನೆ ಮನೆ – ಮನೆಗೆ – ವಿಜಯ್ ಕೊಡವೂರು.

ಕೇಂದ್ರ ಸರಕಾರದ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆಯನ್ನು ಕೊಡವೂರು ಯುವಕ ಸಂಘದಲ್ಲಿ ಇಂದು ನಡೆಯಿತು.

ಕೊಡವೂರಿನಲ್ಲಿ ಪ್ರತಿಯೊಂದು ಮನೆಗೂ ಅಡುಗೆ ಅನಿಲ ಜೋಡಣೆ ಇರಬೇಕು ಎಂದು ಸರ್ವೆಯನ್ನು ಮಾಡಿದಾಗ ಸುಮಾರು 13 ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಇರುವುದಿಲ್ಲ ಎಂದು ತಿಳಿದು ಬಂತು.ಈಗಾಗಲೇ ನರೇಂದ್ರ ಮೋದಿಯವರ ಯೋಜನೆಯಲ್ಲಿ ಒಂದಾಗಿರುವ ಉಜ್ವಲ್ ಯೋಜನೆಯ ಮಾಹಿತಿಯನ್ನು ಪಡೆದು, ಚಿಕ್ಕ ಚಿಕ್ಕ ಶಿಬಿರವನ್ನು ಸಂಘ ಸಂಸ್ಥೆಗಳ ಸಹಕಾರದಿಂದ ಶಿಬಿರವನ್ನು ನಡೆಸಿ ಅವರಿಗೆ ಉಜ್ವಲ್ ಯೋಜನೆಯಲ್ಲಿ ಅಡಿಗೆ ಅನಿಲ ನೀಡಲು ಸಾಧ್ಯವಾಯಿತು.

ಕೊಡವೂರಿನಲ್ಲಿ ಸಂಘ – ಸಂಸ್ಥೆಗಳ ಸಹಾಕರದಿಂದ ಇಂತಹ ಅನೇಕ ಶಿಬಿರವನ್ನು ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಮನೆ ಮನಸ್ಸಿಗೆ ತಲುಪಿಸುವ ನನ್ನ ಜವಾಬ್ದಾರಿ ಎಂದರು.

ಈ ಸಂದರ್ಬದಲ್ಲಿ ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಅಡುಗೆ ಅನಿಲ ವಿತರಕರಾದ ವರ್ಷ ನಾರಾಯಣ್, ರಾಘವೇಂದ್ರ ರಾವ್, ವಿನಯ್ , ವಾಣಿ ಇನ್ನಿತರರು ಉಪಸ್ಥಿತರಿದ್ದರು.

ಪ್ರಭಾತ್ ಕೊಡವೂರು ಎಲ್ಲರನ್ನೂ ಸ್ವಾಗತಿಸಿ , ವಂದಿಸಿದರು.

 
 
 
 
 
 
 
 
 

Leave a Reply