ಉಡುಪಿ ಜಿಲ್ಲಾ ವರ್ತಕರ ಸಂಘದಿಂದ ಎಲ್ಲಾ ವರ್ತಕರಿಗೆ ಹಾಗು ಸಿಬ್ಬಂದಿಗೆ ಉಚಿತ ಲಸಿಕೆ ಹಾಕುವಂತೆ  ಜಿಲ್ಲಾಧಿಕಾರಿಗೆ ಮನವಿ. 

ಉಡುಪಿ ಜಿಲ್ಲಾ ವರ್ತಕರ  ಸಂಘದಿಂದ  ಉಡುಪಿ ಜಿಲ್ಲಾಡಳಿತಕ್ಕೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು  ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಸರಕಾರದಿಂದ ಎಲ್ಲಾ ಬಗೆಯ  ಅಂಗಡಿಗಳನ್ನು ತೆರೆದು  ವ್ಯವಹಾರ ಮಾಡಲು ಅನುಮತಿ  ನೀಡುವಂತೆ ವಿನಂತಿಸಲಾಯಿತು. 
ಮನವಿ ಸ್ವಿಕರಿಸಿದ ಅಪರ ಜಿಲ್ಲಾಧಿಕಾರಿ ಸರಕಾರದಿಂದ ಎಲ್ಲಾ  ವರ್ತಕರಿಗೆ ಹಾಗು ಸಿಬ್ಬಂದಿಗೆ ಉಚಿತ ಲಸಿಕೆ ನೀಡುವ ಬಗ್ಗೆ ಮಾಹಿತಿ ನೀಡಿದರು.  ಶಾಸಕರ ರಘುಪತಿ ಭಟ್   ರವರಿಗೂ ಮನವಿ ಸಲ್ಲಿಸಿ ಸಂಘದ ಸದಸ್ಯರಿಗೆ ವ್ಯವಹಾರ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಲಾಯಿತು. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಐರೋಡಿ ಸಹನ ಶೀಲ ಪೈ, ಬೆನಕ ಹರ್ಷವರ್ಧನ, ಪ್ರಕಾಶ್ ಉಪಾದ್ಯಾಯ, ಅಬ್ದುಲ್ಲಾ , ಉಪಾಧ್ಯಕ್ಷ ವಸಂತ ಭಟ್, ಕಾರ್ಯದರ್ಶಿ ನಾಗರಾಜ್ ಪಾದೆ ಮಠ, ವಿಶ್ವನಾಥ್ ಗಂಗೊಳ್ಳಿ,  ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply