ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹ 2021

ಮಣಿಪಾಲ : ಸಾಂಕ್ರಾಮಿಕ ರೋಗಗಳ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲವು ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹದ ಅಂಗವಾಗಿ 18 ನವೆಂಬರ್ 2021 ರಿಂದ 24 ನವೆಂಬರ್ 2021 ರವೆರೆಗೆ ಆಂಟಿಮೈಕ್ರೊಬಿಯಲ್ ಪ್ರತಿರೋಧದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಈ ವರ್ಷದ ಧ್ಯೇಯ ವಾಕ್ಯ “ಜಾಗೃತಿಯನ್ನು ಹರಡಿ ಪ್ರತಿರೋಧವನ್ನು ನಿಲ್ಲಿಸಿ”.

ನಿನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ “ವಿಶ್ವ ಆರೋಗ್ಯ ಸಂಸ್ಥೆಯು, ಮಾನವರ ಆರೋಗ್ಯಕ್ಕೆ ಇರುವ 10 ಬೆದರಿಕೆಗಳಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಒಂದು ಎಂದು ಘೋಷಿಸಿದೆ. ಇಂದು ಆಂಟಿಮೈಕ್ರೊಬಿಯಲ್ ಪ್ರತಿರೋಧವು ಪ್ರತಿ ನಿಮಿಷಕ್ಕೆ ಒಬ್ಬ ವ್ಯಕ್ತಿಯನ್ನು ಕೊಲ್ಲುತಿದೆ ಮತ್ತು ಇದು ಬಹಳ ಸಂಕೀರ್ಣವಾದ ಸಮಸ್ಯೆಯಾಗಿದೆ,. ಇದನ್ನು ತಡೆಗಟ್ಟಲು ಏಕೀಕೃತ ಮುಲ್ಟಿಸೆಕ್ಟರಲ್ ವಿಧಾನದ ಅಗತ್ಯವಿದೆ. 

ವೇಗವರ್ಧಿತ ಬೆದರಿಕೆಗೆ ಕೆಲವು ಕಾರಣಗಳೆಂದರೆ- 1) ಆ್ಯಂಟಿಬಯೋಟಿಕ್ಗಳ ಅತಿಯಾದ ಬಳಕೆ ಅಥವಾ ದುರ್ಬಳಕೆ, 2) ಜಾನುವಾರುಗಳಲ್ಲಿ ಪ್ರತಿಜೀವಕಗಳ ವ್ಯಾಪಕ ಬಳಕೆ, ಕೃಷಿ ಚಟುವಟಿಕೆಗಳಲ್ಲಿ ಪ್ರತಿಜೀವಕ ವ್ಯಾಪಕ ಬಳಕೆ, ಕಳಪೆ ರೋಗ ನಿರ್ಣಯ, ತಪ್ಪಾದ ಔಷದಗಳ ಅಭ್ಯಾಸ 3) ಸಾರ್ವಜನಿಕ ಆರೋಗ್ಯ ಸಮಸ್ಯೆಗಳಾದ ನೈರ್ಮಲ್ಯ, ಶುದ್ಧ ಕುಡಿಯುವ ನೀರಿನ ಅಭಾವ. ಆದ್ದರಿಂದ 2015 ರಲ್ಲಿ ಆಂಟಿಮೈಕ್ರೊಬಿಯಲ್ ಸಮಸ್ಯೆಯನ್ನು ನಿಭಾಯಿಸಲು WHO ಜಾಗತಿಕ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತು” ಎಂದರು.

ಡಾ ರಾಮಸುಬ್ರಮಣಿಯನ್, ಹಿರಿಯ ಸಾಂಕ್ರಾಮಿಕ ರೋಗ ಸಲಹೆಗಾರರು, ಅಪೋಲೋ ಆಸ್ಪತ್ರೆ, ಚೆನ್ನೈ, ಮತ್ತು ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರು ಗೌರವ ಅತಿಥಿಯಾಗಿ ಮಾತನಾಡಿ “ಆರಂಭದ ದಶಕಗಳಲ್ಲಿ ಕೆಲವು ಮಾತ್ರ ಸಾಂಕ್ರಾಮಿಕ ರೋಗಗಳ ತಜ್ಞರಿದ್ಧರು ಮತ್ತು ಭಾರತದ ಹೆಚ್ಚಿನ ಭಾಗದಲ್ಲಿ ಈ ತಜ್ಞರ ಕೊರತೆಯಿದೆ ಎಂದು ಹೇಳಿದರು. ಈಗ ಸಾಂಕ್ರಾಮಿಕ ರೋಗ ವಿಭಾಗವು ದೇಶದ ಎಲ್ಲಾ ಭಾಗದಲ್ಲಿ ಮಹತ್ತರವಾಗಿ ಅಭಿವೃದ್ಧಿ ಹೊಂದಿದ್ದು, ಡಾ.ಕವಿತಾ ಸರವು ಅವರನ್ನು ಅಭಿನಂದಿಸಿ ಇಲಾಖೆಗೆ ಶುಭ ಹಾರೈಸಿದರು. ಎಲ್ಲಾ ಸಾಂಸ್ಥಿಕ ಮುಖ್ಯಸ್ಥರು ಮತ್ತು ನೀತಿ ನಿರೂಪಕರು ಆಂಟಿಮೈಕ್ರೊಬಿಯಲ್ ಕಣ್ಗಾವಲು ಬಲಪಡಿಸಲು ಮತ್ತು ಇರುವ ನೀತಿಗಳನ್ನು ಪರಿಣಾಮಕಾರಿಯಾಗಿ ಅಭ್ಯಾಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಿದರು”.

ಸಮ್ಮೇಳನದ ಮುಖ್ಯ ಆಯೋಜಕ ಡಾ. ಕವಿತಾ ಸರವು, ಸಮ್ಮೇಳನದ ಕುರಿತು ಅವಲೋಕನ ನೀಡಿದರು. ಈ ಸಮ್ಮೇಳನವು 5 ದಿನಗಳ ಕಾಲ ನಡೆಯಲಿದ್ದು ಆಂಟಿಮೈಕ್ರೊಬಿಯಲ್ ಪ್ರತಿರೋಧ ಮತ್ತು ಉಸ್ತುವಾರಿಯ ವಿವಿಧ ಅಂಶಗಳ ಕುರಿತು ಚರ್ಚಿಸಲು 11 ತಜ್ಞರು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ತುರ್ತು ವೈದ್ಯಕೀಯ ಇಲಾಖೆ, KMC ಮಂಗಳೂರಿನ ಜನರಲ್ ಮೆಡಿಸಿನ್ ಮತ್ತು ಮೈಕ್ರೋಬಯಾಲಜಿ ವಿಭಾಗಗಳು, MCOPS ನಿಂದ ಫಾರ್ಮಸಿ ಅಭ್ಯಾಸ ವಿಭಾಗ ಮತ್ತು ವೇಯ್ನ್ ಸ್ಟೇಟ್ ಯೂನಿವರ್ಸಿಟಿ, USA ನ ಸಾಂಕ್ರಾಮಿಕ ರೋಗಗಳ ವಿಭಾಗ ಭಾಗವಹಿಸಲಿದ್ದಾರೆ.

ಕೆಎಂಸಿ ಮಣಿಪಾಲದ ಡೀನ್ ಶರತ್ ಕುಮಾರ್ ರಾವ್ ಸ್ವಾಗತಿಸಿದರು. ಡಾ ಸ್ನೇಹಾ ದೀಪಕ್ ಮಲ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply