ಉಡುಪಿ : ಯು.ಪಿ.ಎಂ.ಸಿ ಗೆ ಕೃಷ್ಣಾಪುರ ಶ್ರೀಗಳ ಭೇಟಿ

ಉಡುಪಿ : ಭಾವೀ ಪರ್ಯಾಯ ಪೀಠಾಧೀಶರಾದ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಜನವರಿ 5 ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿಗೆ ಭೇಟಿ ಇತ್ತರು. 

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಶ್ರೀಗಳವರನ್ನು ಸ್ವಾಗತಿಸಿ ಮಾಲಿಕೆ-ಮಂಗಳಾರತಿಯನ್ನು ಸಮರ್ಪಿಸಿದರು.

ಶ್ರೀಗಳವರು ಮಾತನಾಡುತ್ತಾ ದೇವಾಲಯ ಮತ್ತು ವಿದ್ಯಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕಗಳು. ವಿದ್ಯಾಲಯದಿಂದ ಪಡೆದ ಜ್ಞಾನದ ಜೊತೆಗೆ ದೈವಭಕ್ತಿಯನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿಯು ಪರಿಪೂರ್ಣನಾಗುವನು. ವಿದ್ಯಾಲಯದ ಕಾರ್ಯ ಹಾಗೂ ದೇವಾಲಯದ ಕಾರ್ಯಗಳು ಈ ದಿಶೆಯಲ್ಲಿ ಸ್ತುತ್ಯವಾಗಿದ್ದು ವಿದ್ಯಾಲಯದ ಯಶಸ್ಸಿಗೆ ನಾವು ಪ್ರಾರ್ಥಿಸಿದರೆ ಪರ್ಯಾಯದ ಯಶಸ್ಸಿಗೆ ನೀವೆಲ್ಲಾ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಹೇಳಿದರು.

ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿವರ್ಗ ಹಾಗು ವಿದ್ಯಾರ್ಥಿಗಳಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು.

 
 
 
 
 
 
 
 
 
 
 

Leave a Reply