ಉಡುಪಿ ಪೇಜಾವರ ಮಠದಲ್ಲಿ ವಿಶೇಷ ಆಚರಣೆ ಸಂಸ್ಮರಣೆ

ಉಡುಪಿ : ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವದ ಅಂಗವಾಗಿ ಉಡುಪಿ ಪೇಜಾವರ ಮಠದಲ್ಲಿ ವಿಶೇಷ ಆಚರಣೆ ಸಂಸ್ಮರಣೆ ನೆರವೇರಿತು.

 

ದಿವಾನ ಎಂ ರಘುರಾಮಾಚಾರ್ಯ, ಸಿ ಇ ಒ ಸುಬ್ರಹ್ಮಣ್ಯ ಭಟ್ , ವ್ಯವಸ್ಥಾಪಕ ಇಂದುಶೇಖರ ಹೆಗಡೆ, ಎಸ್ ವಿ ಭಟ್, ರಾಮಚಂದ್ರ ಉಪಾಧ್ಯಾಯ, ಕೊಟ್ಟಾರಿ ಸಂತೋಷ್ ಮೊದಲಾದವರು ಸಹಕರಿಸಿದರು. ಹಂಡೆದಾಸ ಪ್ರತಿಷ್ಠಾನದ ವತಿಯಿಂದ ಉದಯಾಸ್ತಮಾನ ಭಜನೆ ನಡೆಯಿತು.

ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವದ ಪ್ರಯುಕ್ತ ಬುಧವಾರ ಶ್ರೀಮಠದ ಅಧೀನ ಸಂಸ್ಥೆ ಉಡುಪಿಯ ವಿದ್ಯೋದಯ ಶಾಲೆ ಮತ್ತು ಕಾಲೇಜಿನಲ್ಲಿ ಶ್ರೀಪಾದರ ಸಂಸ್ಮರಣೆ ಮತ್ತು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

 
 
 
 
 
 
 
 
 
 
 

Leave a Reply