ಉಡುಪಿ : ಮಗ ಬಿಟ್ಟು ಹೋದ ವೃದ್ಧರ ರಕ್ಷಣೆ

ಉಡುಪಿ : ಕಲ್ಸಂಕ ಮುಖ್ಯ ರಸ್ತೆಯಲ್ಲಿ ಮಗ ಬಿಟ್ಟು ಹೋದ ನಿತ್ರಾಣದಿಂದ ಅಸಹಾಯಕರಾದ ಹಣೆಯಲ್ಲಿ ಬಿದ್ದ ಗಾಯದಿಂದ ರಕ್ತ ಸ್ರಾವವಾಗಿದ್ದ ಹಿರಿಯ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ತನ್ನ ವಾಹನದಲ್ಲಿ ಕಾರ್ಕಳ ಬೈಲೂರಿನ ಗಂಗೋತ್ರಿ ಹಿರಿಯ ನಾಗರಿಕರ ಆಶ್ರಮಕ್ಕೆ ದಾಖಲಿಸಿದ ಘಟನೆ ಜ.13ರ ರಾತ್ರಿ ನಡೆದಿದೆ. 

ರಕ್ಷಣಾ ಕಾರ್ಯದಲ್ಲಿ ಮಣಿಪಾಲ ಠಾಣಾ ಹೆಡ್ ಕಾನ್ಸ್ಟೇಬಲ್ ಶಂಕರ್ ಸಹಕರಿಸಿದ್ದಾರೆ. ವೃದ್ಧರ ಹೆಸರು ತಿಮ್ಮಪ್ಪ(85ವ), ಶಿವಮೊಗ್ಗದ ಶಿಕಾರಿಪುರದವರೆಂಬ ಮಾಹಿತಿ ಇದೆ.ಮಗ ಮಂಜ ಉಡುಪಿಯಲ್ಲಿ ಬಿಟ್ಟು ಎಲ್ಲಿ ಹೋಗಿದ್ದಾನೆಂದು ಗೊತ್ತಿಲ್ಲ. 2 ಹೆಣ್ಣು ಹಾಗೂ 2 ಗಂಡು ಮಕ್ಕಳಿದ್ದು ಮಡದಿಯ ಹೆಸರು ಬಸಮ್ಮ ಎಂದಿದ್ದಾರೆ.

ಹಿರಿಯ ನಾಗರಿಕ ಸಹಾಯವಾಣಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಹಿರಿಯ ನಾಗರಿಕ ಸಹಾಯವಾಣಿ 0820-2526394 ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

 
 
 
 
 
 
 
 
 
 
 

Leave a Reply