ಉಳ್ಳೂರು – 74 : ಬಿಜೆಪಿ ಶಕ್ತಿ ಕೇಂದ್ರದಲ್ಲಿ ಸೇವಾ ಪಾಕ್ಷಿಕ ಅಭಿಯಾನ ಮತ್ತು ಬೂತ್ ಸಶಕ್ತಿಕರಣ ಸಭೆ

ನರೇಂದ್ರ ಮೋದಿ ಯವರ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿ ಸೆಪ್ಟೆಂಬರ್17 ರಿಂದ ಒಕ್ಟೋಬರ್ 02ರವರೆಗೆ ಜಿಲ್ಲಾ 6 ಮಂಡಳ ಗಳಲ್ಲಿ 13 ಅಂಶದ ಕಾರ್ಯಕ್ರಮವನ್ನು ಆಯೋಜಿಸಿದ್ದು ಅದರಂತೆ 18.09.2022 ರ ಭಾನುವಾರ ಬೈಂದೂರು ಮಂಡಲದ 64 ಶಕ್ತಿ ಕೇಂದ್ರಗಳಲ್ಲಿ ಸೇವಾ ಪಾಕ್ಷಿಕ ಅಭಿಯಾನ ಮತ್ತು ಬೂತ್ ಸಶಕ್ತಿಕರಣ ಕಾರ್ಯಾಗಾರ ನಡೆಯಿತು.

ಅದರಂತೆ ಸಿದ್ದಾಪುರ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಉಳ್ಳೂರು ಶಕ್ತಿ ಕೇಂದ್ರ (ಉಳ್ಳೂರು -ಮಚ್ಚಟ್ಟು) ದ 5 ಬೂತ್ ಗಳ ಸೇವಾ ಪಾಕ್ಷಿಕ ಸಭೆಯನ್ನು ರಾಜ್ಯ ಬಿಜೆಪಿ ಫಲಾನುಭವಿ ಪ್ರಕೋಷ್ಟದ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿಯವರು ಉಳ್ಳೂರಿನಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಸಿದ್ದಾಪುರ ಮಹಾಶಕ್ತಿಕೇಂದ್ರ ಪ್ರಭಾರಿ ಹಾಗೂ ಜಿಲ್ಲಾ ಬಿಜೆಪಿ ವ್ಯಾಪಾರ್ ಮತ್ತು ವಾಣಿಜ್ಯ ಪ್ರಕೋಷ್ಟದ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ,ಕ್ಯಾಮ್ಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಗ್ರಾ.ಪ.ಅಧ್ಯಕ್ಷ ರಾಜೇಶ್ ಹೆಬ್ಬಾರ್, ಶಕ್ತಿಕೇಂದ್ರ ಅಧ್ಯಕ್ಷ ಜಯರಾಮ,ಹರ್ಷ ಸಿದ್ದಾಪುರ ಶೆಟ್ಟಿ,ಗ್ರಾ.ಸ.ಪ್ರಸಾದ್ ಶೆಟ್ಟಿ,ಶೇಖರ ನಾಯ್ಕ್,ಗಣೇಶ್ ಭಟ್,ಗೋವಿಂದ ಶೆಟ್ಟಿ,ಗಣೇಶ್ ಶೆಟ್ಟಿ ತೊಂಬಟ್ಟು, ರತ್ನಕರ ಶೆಟ್ಟಿ ವಾರನಪಾಲ್, ಹಾಗೂ ಪಕ್ಷದ ವಿವಿಧ ಜವಾಬ್ದಾರಿ ಹೊತ್ತ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಜಿ ಜಿ.ಪ.ಸದಸ್ಯ ರೋಹಿತ್ ಕುಮಾರ್ ಶೆಟ್ಟಿ
ಪ್ರಾಸ್ತಾವಿಕ ಮಾತನಾಡಿ,ದಿನೇಶ್ ಪೂಜಾರಿ ಧನ್ಯವಾದ ಗೈದರು.

 
 
 
 
 
 
 
 
 
 
 

Leave a Reply