ಉಡುಪಿ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ

ಉಡುಪಿ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯು ತಾ.೧೭-೦೫-೨೦೨೨ ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿದ್ದು ಅಧ್ಯಕ್ಷರಾಗಿ ಎಂ. ನಾರಾಯಣ ಭಟ್ಟರು ತೃತೀಯ ಬಾರಿಗೆ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹರಿಕೃಷ್ಣ ಶಿವತ್ತಾಯ, ಕಾರ್ಯದರ್ಶಿಯಾಗಿ ಆನಂದ ಗಾಣಿಗ, ಕೋಶಾಧಿಕಾರಿಯಾಗಿ ಸುಂದರ ಪ್ರಭು, ಜತೆ ಕಾರ್ಯದರ್ಶಿಯಾಗಿ ಪಾಂಡು ಯಂ. ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ನಾಯಕ್‌ರವರು ಆಯ್ಕೆಗೊಂಡಿದ್ದಾರೆ.

ಶಿವಣ್ಣ ಆಂಚನ್, ಯು. ವಿಶ್ವನಾಥ್, ಸರಸ್ವತಿ, ಪುಷ್ಪ, ಶಕುಂತಳ ಹೆಗ್ಡೆ, ವಾಸು ಆಚಾರ್, ವೀಣಾ ರಾವ್, ರತ್ನಾಕರ ಕಿಣಿ, ಸುಬ್ರಹ್ಮಣ್ಯ ಭಟ್ ಮತ್ತು ರಘು ರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply