ಉಡುಪಿ : ಮೂಡನಿಡಂಬೂರು ಮಾಗಣೆಯಿಂದ ವೈಭವದ ಪರ್ಯಾಯ ಹೊರೆಕಾಣಿಕೆ

ಉಡುಪಿ : ಶ್ರೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ನಡೆಯಲಿರುವ ಹಸಿರು ಹೊರೆಕಾಣಿಕೆ ಕಾರ್ಯಕ್ರಮದ ಮೂಡನಿಡಂಬೂರು ಮಾಗಣೆಯ ಪೂರ್ವಭಾವಿ ಸಭೆ ಕಿನ್ನಿಮೂಲ್ಕಿ ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ಸಭೆಯಲ್ಲಿ ಭಾಗವಹಿಸಿದ ಪರ್ಯಾಯ ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ ಮೂಡನಿಡಂಬೂರು ಮಾಗಣೆ ಹಾಗೂ ಕೃಷ್ಣಾಪುರ ಮಠಕ್ಕೂ ಧಾರ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಅವಿನಾಭಾವ ಸಂಬಂಧವಿದೆ.

ಈ ಮಾಗಣೆಯಿಂದ ಹಿಂದಿನಿಂದಲೂ ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸುವುದು ಸಂಪ್ರದಾಯವಾಗಿತ್ತು ಈ ಬಾರಿ ಇನ್ನಷ್ಟು ವೈಭವದಿಂದ ಹೊರೆಕಾಣಿಕೆಯನ್ನು ಸಮರ್ಪಿಸುವಂತೆ ಮನವಿ ಮಾಡಿಕೊಂಡರು. ಅಧ್ಯಕ್ಷತೆಯನ್ನು ಹೊರೆಕಾಣಿಕೆಯ ಸಂಘಟಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ವಹಿಸಿದ್ದರು.

ದೇವಸ್ಥಾನದ ಅರ್ಚಕ ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿಯ ಮುರಳೀಧರ್ ಬಲ್ಲಾಳ್, ಸಂಜೀವ ಎ ,ಕಡೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ ಪರ್ಯಾಯ ಸಮಿತಿಯ ಜತೆ ಕಾರ್ಯದರ್ಶಿ ರಾಜಗೋಪಾಲ್ ಭಟ್ ,ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ವೆಂಕಣ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು .ಜಯಕರ್ ಸೇರಿಗಾರ ವಂದಿಸಿದರು.

 
 
 
 
 
 
 
 
 
 
 

Leave a Reply