ತುಷಿಮಾಮ ಮೈಸೂರು ಶಾಖೆಯ ವತಿಯಿಂದ “ಗೊಬ್ಬು ಗಮ್ಮತ್” ಆಯೋಜನೆ 

ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಮೈಸೂರು ಶಾಖೆಯ ವತಿಯಿಂದ “ಗೊಬ್ಬು ಗಮ್ಮತ್” ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಆರ್. ವಾಸುದೇವ ಭಟ್ ಜ್ಯೋತಿ ಬೆಳಗಿಸುವುದರ ಮೂಲಕ ಸ್ಪರ್ದೆಗಳಿಗೆ ಚಾಲನೆ ನೀಡಿದರು.
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲದ ಸದಸ್ಯರು, ಮನೆ ಮಂದಿಯೆಲ್ಲ ಭಾಗವಹಿಸಿ ದಿನವಿಡೀ ಗಮ್ಮತ್ತಿನಿಂದ ದಿನ ಕಳೆದರು. ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.  ಸಂಜೆ ಸಮಾರೋಪ ಹಾಗು ಬಹುಮಾನ ವಿತರಣ ಸಮಾರಂಭ ನಡೆಯಿತು. 
ಈ ಸಂದರ್ಭದಲ್ಲಿ ತುಷಿಮಾಮ ಗೌರವ ಅಧ್ಯಕ್ಷ ಎಂ ಕೆ ಪುರಾಣಿಕ್, ಅಧ್ಯಕ್ಷ ರವಿ ಶಾಸ್ತ್ರಿ, ಕೋಶಾಧಿಕಾರಿ ಸುರೇಶ ತಂತ್ರಿ ಹಾಗು ಪಧಾದಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಪ್ರಭಾ ಎಸ್. ಭಟ್ ಸ್ವಾಗತಿಸಿದರು. ಜಗದೀಶ ಹೆಬ್ಬಾರ್ ಧನ್ಯವಾದವಿತ್ತರು. ಸುರೇಖಾ ಉಪಾಧ್ಯ ಆರ್ ಪ್ರಾರ್ಥಿಸಿದರು. 
 
 
 
 
 
 
 
 
 
 
 
 

Leave a Reply