ತುಳು ಭಾವಗೀತೆ ಸ್ಪರ್ಧೆ-2022

ಉಡುಪಿ: ತುಳುಕೂಟ ಉಡುಪಿ (ರಿ.) ವತಿಯಿಂದ ತುಳುಕವಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ-2023 ದಿನಾಂಕ:08.01.2003 ನೇ ಭಾನುವಾರ ಬೆಳಗ್ಗೆ 9.00 ಗಂಟೆಗೆ ಉಡುಪಿ ಎಂ.ಜಿ.ಎ0. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.

6ವರ್ಷದಿಂದ14 ವರ್ಷದವರೆಗಿನವರಿಗೆ ಜೂನಿಯರ್ ವಿಭಾಗ, 15 ವರ್ಷ ಮೇಲ್ಪಟ್ಟು ಎಲ್ಲಾ ವಯೋಮಾನದವರಿಗೆ ಸೀನಿಯರ್ ವಿಭಾಗದಲ್ಲಿ ಸ್ಫರ್ಧೆ ನಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯವರು ಸ್ಫರ್ಧೆಯಲ್ಲಿ ಭಾಗವಹಿಸಬಹುದು.

ಯಾವುದೇ ಸಂಗೀತ ವಾದ್ಯಪರಿಕರಗಳನ್ನು ಬಳಸದೆ 3ನಿಮಿಷದ ತುಳುಭಾವಗೀತೆ ಹಾಡುವುದು. ಹಿರಿಯ, ಕಿರಿಯ ತುಳು ಸಾಹಿತಿಗಳ ರಚನೆ ಮತ್ತು ಸ್ವರಚಿತ ತುಳುಭಾವಗೀತೆಗಳಿಗೆ ಆದ್ಯತೆ. ಭಾವ ಗೀತೆಯ ನಕಲು ಪ್ರತಿಗಳನ್ನು ಸ್ಫರ್ಧೆಯ ದಿನ ಸಂಘಟಕರಿಗೆ ನೀಡುವುದು ಕಡ್ಡಾಯ. ಪ್ರತೀ ವಿಭಾಗದಲ್ಲಿ ಪ್ರಥಮ ರೂ. 2000-00 ನಗದು, ಪ್ರಶಸ್ತಿ ಫಲಕ, ದ್ವಿತೀಯ ರೂ.1500-00 ನಗದು, ಪ್ರಶಸ್ತಿಫಲಕ, ತೃತೀಯ ರೂ.1000-00ನಗದು, ಪ್ರಶಸ್ತಿ ಫಲಕ ನೀಡಲಾಗುವುದು.

ಸ್ಫರ್ಧಿಗಳು ಡಿಸೆಂಬರ್ 31ರೊಳಗೆ ಹೆಸರು ನೋಂದಾಯಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಅಥವಾ ವಾಟ್ಸಾಪ್ ಮಾಡಬಹುದು (ಮೊಬೈಲ್: 9964019229, 9740656695, 9880825626 ) ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply