ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಸಹಕಾರ ಶಿಕ್ಷಣ ನಿಧಿಗೆ ದೇಣಿಗೆ

ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ 2020-2021ನೇ ಸಾಲಿನ ಲಾಭಾಂಶದಲ್ಲಿ ಕರ್ನಾಟಕ ಸಹಕಾರ ಕಾಯ್ದೆ 1959ರ ಕಲಂ 57(2)(ಎ)ರಂತೆ ಸಹಕಾರ ಶಿಕ್ಷಣ ನಿಧಿಯ ಬಗ್ಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಪ್ರತಿನಿದಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕರಾದ ಶ್ರೀ ವಿಶ್ವನಾಥ್ ಎನ್. ಅಮೀನ್‌ರವರಿಗೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು `2,98,280-00ರ ಚೆಕ್ಕನ್ನು ಹಸ್ತಾಂತರಿಸಿದರು. 
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಪಿ. ರಾಘವೇಂದ್ರ ಭಟ್, ನಿರ್ದೇಶಕರಾದ ಶ್ರೀ ಪಿ.ಎನ್. ರವೀಂದ್ರ ರಾವ್, ಶ್ರೀ ಜಗನ್ನಾಥ್ ಜಿ., ಶ್ರೀ ಜಯಪ್ರಕಾಶ್ ಭಂಡಾರಿ, ಶ್ರೀ ದೇವದಾಸ್, ಶ್ರೀ ಭಾಸ್ಕರ್ ರಾವ್ ಕಿದಿಯೂರು, ಶ್ರೀ ಎನ್. ಸೂರ್ಯಪ್ರಕಾಶ್ ರಾವ್, ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್, ಶ್ರೀಮತಿ ಮನೋರಮಾ ಎಸ್., ಶ್ರೀಮತಿ ರೂಪಾ ಮೋಹನ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್. ಕುಮಾರಸ್ವಾಮಿ ಉಡುಪ ಉಪಸ್ಥಿತರಿದ್ದರು.  
 
 
 
 
 
 
 
 
 

Leave a Reply