ರಥೋತ್ಸವದ ವೇಳೆ ತೇರಿಗೆ ವಿದ್ಯುತ್​ ತಂತಿ ತಗುಲಿ 11 ಮಂದಿ ದುರ್ಮರಣ

ತಂಜಾವೂರ್ : ತಮಿಳುನಾಡಿನ ತಂಜಾವೂರಿ ಕಲಿಮೇಡು ಎಂಬಲ್ಲಿ ದೇವಾಲಯದ ರಥೋತ್ಸವದ ವೇಳೆ ವಿದ್ಯುತ್ ಹರಿದು ಭೀಕರ ಅಗ್ನಿದುರಂತವೊಂದು ಸಂಭವಿಸಿದ್ದು, ವಿದ್ಯುತ್ ಹರಿದು 11 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಂಜಾವೂರಿನ ದೇವಾಲಯದ ರಥೋತ್ಸವದ ವೇಳೆ ವಿದ್ಯುತ್ ಹರಿದು ಅಗ್ನಿ ಅವಘಡ ಸಂಭವಿಸಿದ್ದು,11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ತಂಜಾವೂರು ನಲ್ಲಿ ದೇವಾಲಯದ ರಥೋತ್ಸವ ವಿದ್ಯುತ್ ವೈರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು 11 ಜನರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

 
 
 
 
 
 
 
 
 
 
 

Leave a Reply