ಗುಜರಿ ಅಂಗಡಿಗೆ ಬೆಂಕಿ: 11 ಮಂದಿಯ ಸಜೀವ ದಹನ

ತೆಲಂಗಾಣದ ಸಿಕಂದರಬಾದ್ ಸಮೀಪದ ಬೋಯಿ ಗುಡಾದಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ.

ಗುಜರಿ ವಸ್ತುಗಳ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ 11 ಮಂದಿ ಕಾರ್ಮಿಕರು ಜೀವಂತ ದಹನವಾಗಿದ್ದಾರೆ.

ಮೃತಪಟ್ಟ ಕಾರ್ಮಿಕರು ಬಿಹಾರ ಮೂಲದವರಾಗಿದ್ದಾರೆ. ಇದೀಗ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಗೋದಾಮಿನಲ್ಲಿ ರಾಸಾಯನಿಕ ವಸ್ತುಗಳನ್ನು ಕೂಡ ಶೇಖರಿಸಿಡಲಾಗಿತ್ತು ಎಂದು ವರದಿಯಾಗಿದೆ.

ಇದರಿಂದ ಬೆಂಕಿ ಕ್ಷಣ ಮಾತ್ರದಲ್ಲಿ ಹರಡಿದೆ ಎಂದು ಶಂಕಿಸಲಾಗಿದೆ.

ಕರ್ನಾಟಕದ ಉಡುಪಿ ಕಾಪುವಿನ ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸೋಮವಾರ ಮೂವರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

 
 
 
 
 
 
 
 
 

Leave a Reply