ತಾಂಗೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಖಮಂಟಪಕ್ಕೆ ಶಿಲಾನ್ಯಾಸ

ಉಡುಪಿ: ಪೆರಂಪಳ್ಳಿಯ ತಾಂಗೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಾಣವಾಗಲಿರುವ ನೂತನ ಮುಖಮಂಟಪಕ್ಕೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿತು .

ಈ ಹಿಂದೆ ಡಾ ವಿ ಎಸ್ ಆಚಾರ್ಯರು ಮಂತ್ರಿಗಳಾಗಿದ್ದಾಗ ದಿ. ಕಡಿಯಾಳಿ ಅನಂತರಾಮ ಉಪಾಧ್ಯರ ಮುತುವರ್ಜಿಯಲ್ಲಿ ಶಿಥಿಲವಾಗಿದ್ದ ದೇವಳ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ದೊರೆತು ನೂತನ ಶಿಲಾಮಯ ಗರ್ಭಗುಡಿ ತೀರ್ಥಮಂಟಪ ನೆರವೇರಿಸಲಾಗಿತ್ತು .ಇದೀಗ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಕೆ ರಘುಪತಿ ಭಟ್ಟರ ಶಿಫಾರಸಿನಂತೆ ಮಂಜೂರಾದ ಹತ್ತು ಲಕ್ಷ ರೂ ಮತ್ತು ಭಕ್ತರ ನೆರವಿನಿಂದ ಮುಖಮಂಟಪ ರಚನೆಯಾಗುತ್ತಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ .

ಪಾಡಿಗಾರು ಶ್ರೀನಿವಾಸ ತಂತ್ರಿ ವಿಧಿಪೂರ್ವಕ ಶಿಲಾನ್ಯಾಸ ನೆರವೇರಿಸಿದರು .‌ ಅರ್ಚಕ ರಾಘವೇಂದ್ರ ಭಟ್, ಮುರಳಿ ಭಟ್ ಉಪಸ್ಥಿತರಿದ್ದರು .‌ 

 
 
 
 
 
 
 
 
 
 
 

Leave a Reply