ಸರ್ಕಾರ​ದ ​ವಿಶೇಷ ಪ್ಯಾಕೇಜ್‌ನಲ್ಲಿ​ ​ಹೊಟೆಲ್ ನೌಕರರು, ಮಾಲೀಕರಿಗೆ ಅನ್ಯಾಯ~ಡಾ.ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ಹೋಟೆಲ್ ಉದ್ಯಮ ಕೋವಿಡ್ ಎರಡನೇ ಅಲೆ ಪರಿಣಾಮ ಮಾಲೀಕರು, ಸೇರಿ ಸಾವಿರಾರು ಮಂದಿ ನೌಕರರು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿರುವಾಗ ಸರ್ಕಾರ​ದ ​ ವಿಶೇಷ ಪ್ಯಾಕೇಜ್‌ನಲ್ಲಿ ಹೊಟೆಲ್ ನೌಕರರು, ಮಾಲೀಕರನ್ನು ಪರಿಗಣಿಸದೇ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
 ಜಿಲ್ಲೆಯಲ್ಲಿ ಸಣ್ಣ ಕ್ಯಾಂಟೀನ್, ಗೂಡಂಗಡಿ, ದೊಡ್ಡ ರೆಸ್ಟೋರೆಂಟ್‌ಗಳು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮ ಮುಂದುವರಿಸುವುದು ಸವಾಲಾಗಿದೆ. ನಿರ್ವಹಣೆ, ಬ್ಯಾಂಕುಗಳ ಸಾಲ, ನೌಕರರ ಸಂಬಳಕ್ಕೆ ಸಂಬಂಧಿಸಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗ ನಡೆಯುತ್ತಿರುವ ಶೇ.20 ರಷ್ಟು ಪಾರ್ಸೆಲ್ ವ್ಯಪಾರದಿಂದ ಉದ್ಯಮ ನಡೆಸಲು ಸಾಧ್ಯವಿಲ್ಲ. 
 
ಸಾವಿರಾರು ಹೋಟೆಲ್ ನೌಕರರು ಕೆಲಸವಿಲ್ಲದೇ ಅತ್ರಂತ್ರರಾಗಿದ್ದು, ಅವರನ್ನು ಕಾರ್ಮಿಕರಂತೆ ಪರಿಗಣಿಸಿ ಸರ್ಕಾರ ಆರ್ಥಿಕ ಸಹಾಯಧನ ಮಾಡಬೇಕು. ಹೋಟೆಲ್ ಮಾಲೀಕರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ​. ​​​
 
 
 
 
 
 
 
 
 
 
 

Leave a Reply