ಸುರತ್ಕಲ್ ಟೋಲ್’ಗೇಟ್‌ ಮುತ್ತಿಗೆ – ಪೊಲೀಸರ ವಶಕ್ಕೆ

ಮಂಗಳೂರು: ಸಾವಿರಾರು ಹೋರಾಟಗಾರರು ಸುರತ್ಕಲ್ ಟೋಲ್ ಸಂಗ್ರಹ ವಿರೋಧಿಸಿ ಟೋಲ್’ಗೇಟ್’ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಿಜೆಪಿಗೆ ಧಿಕ್ಕಾರ, ನಳಿನ್ ಕುಮಾರ್ ಕಟೀಲ್’ಗೆ ಧಿಕ್ಕಾರ, ಕೂಡಲೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಕೆಲ ಹೊತ್ತು ಪೊಲೀಸರೊಂದಿಗೆ ವಾಗ್ದಾದ ನಡೆದು ನಂತರ ಆಕ್ರೋಶಿತ ಪ್ರತಿಭಟನಾಕಾರರು ಟೋಲ್’ಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಭಾರೀ ಸಂಖ್ಯೆಯಲ್ಲಿ ‌ನಿಯೋಜಿತ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟರು. ನಂತರ ಹೋರಾಟ ಸಮಿತಿ ಮುಖಂಡರನ್ನು ಮತ್ತು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

 
 
 
 
 
 
 
 
 
 
 

Leave a Reply