ಕೃಷ್ಣಾಪುರ ಮಠದ ಪರ್ಯಾಯಕ್ಕೆ ಸರಕಾರದಿಂದ ಸರ್ವರೀತಿಯ ಸಹಕಾರ ~ ಸಚಿವ ವಿ. ಸುನಿಲ್ ಕುಮಾರ್

ಉಡುಪಿ ರಥಬೀದಿಯ ಶ್ರೀಕೃಷ್ಣ ಸಭಾಮಂದಿರದಲ್ಲಿ, ಭಾವೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಸರ್ವಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ಜರಗಿತು. ಸಭೆಯಲ್ಲಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಇಂಧನ,ಕನ್ನಡ , ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್ ರವರು ಸರಕಾರದ ವತಿಯಿಂದ ಸರ್ವರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು. 
 
 ಉಡುಪಿ ಶಾಸಕರೂ ಪರ್ಯಾಯ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರಘುಪತಿ ಭಟ್ಟರು ಪ್ರಸ್ತಾವಿಸಿದರು. ಕಾಪು ಶಾಸಕರಾದ ಲಾಲಾಜಿ ಮೆಂಡನ್, ಉಡುಪಿ ನಗರಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ  ಕಿಣಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸುಬ್ರಹ್ಮಣ್ಯ ಯಡಪಡಿತ್ತಾಯರು ಉಪಸ್ಥಿತರಿದ್ದರು.
ವಾಸುದೇವ ಪರಂಪಳ್ಳಿಯವರು ಪ್ರಾರ್ಥಿಸಿ , ಪರ್ಯಾಯ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಧನ್ಯವಾದವನ್ನಿತ್ತರು, 
 
ಸಮಿತಿಯ ಪಿಆರ್ ಓ  ಬಿ.ವಿ.ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಮಿತಿಗಳ ಮುಖಂಡರು ಹಾಗೂ ಶ್ರೀಕೃಷ್ಣ ಭಕ್ತರು ಭಾಗವಸಿದ್ದರು. ಈ ಸಂದರ್ಭದಲ್ಲಿ iಪರ್ಯಾಯ ಸಲುವಾಗಿ ಸರ್ಕಾರಕ್ಕೆ ವಿಶೇಷ ಮನವಿಯನ್ನು ಸಲ್ಲಿಸಲಾಯಿತು.
 
 
 
 
 
 
 
 
 
 
 

Leave a Reply