ಸ್ವಾತಂತ್ರ್ಯ ಹಾಗು ಸ್ವಾವಲಂಬನೆಯ ಮಹತ್ವ

75 ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯನ್ನು ಸುನಾಗ್ ಆಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ ।। ನರೇಂದ್ರ ಕುಮಾರ್ ಹೆಚ್ . ಎಸ್ ಮತ್ತು ಡಾ ।।ವೀಣಾ ನರೇಂದ್ರ ಹೆಚ್ ಇವರ ನೇತ್ರತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು . ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊಫೆಸರ್ ರಾಧಾಕೃಷ್ಣ ರಾವ್ ,ನಿವೃತ್ತ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಜೆ . ಸಿ . ಬಿ . ಎಮ್ ಕಾಲೇಜು , ಶೃಂಗೇರಿ ಇವರು ಧ್ವಜಾರೋಹಣ ಮಾಡಿ, ರಾಷ್ಟಧ್ವಜದ ಮಹತ್ವವನ್ನು ತಿಳಿಸಿದರು.

ಆಡಳಿತ ನಿರ್ದೇಶಕರಾದ ಡಾ ।। ನರೇಂದ್ರ ಕುಮಾರ್ ಎಚ್ . ಎಸ್ ಇವರು ಸ್ವಾವಲಂಬನೆ ಹಾಗು ಸ್ವತಂತ್ರತೆಯ ವ್ಯತ್ಯಾಸ ಹಾಗುಇವೆರಡನ್ನೂ ನಮ್ಮ ಜೀವನದಲ್ಲಿ ಹೇಗೆ ಅಳವಡಿಸಬೇಕು ಎಂಬುದನ್ನು ತಿಳಿಸಿದರು. ಡಾ ।। ಶರತ್ ಮಧ್ಯಸ್ಥ ಮತ್ತು ಆತ್ಮೀಯರಾದ ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕರಾದ ಗೋಪಿನಾಥ್ ಮತ್ತು ಲಾರೆನ್ಸ್ ಹಾಗು ಸುನಾಗ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ಧರು . ಕುಮಾರಿ ಸಂಹಿತಾ ಎಚ್. ಎನ್ ಎಲ್ಲರನ್ನು ಸ್ವಾಗತಿಸಿದರು . ಹಾಗು ಡಾ ।। ವೀಣಾ ನರೇಂದ್ರ ಎಚ್ ಇವರು ಎಲ್ಲರಿಗೂ ಧನ್ಯವಾದ ತಿಳಿಸಿದರು .

 
 
 
 
 
 
 
 
 
 
 

Leave a Reply