ಕೊಡವೂರು ಉದ್ದಿನ ಹಿತ್ಲು ಅಂಗನವಾಡಿಯ ಮಕ್ಕಳಿಗೆ ಅಂಚೆ ಇಲಾಖೆಯ ಯೋಜನೆಗಳಾದ ಸುಕನ್ಯಾ ಸಮೃದ್ದಿ ಖಾತೆ ಹಾಗು ಪಿಪಿಎಫ್ ಖಾತೆಗಳ ಪಾಸ್ ಪುಸ್ತಕ ವಿತರಣೆ 

ಕೊಡವೂರು ಉದ್ದಿನ ಹಿತ್ಲು ಅಂಗನವಾಡಿಯ ಮಕ್ಕಳಿಗೆ ಅಂಚೆ ಇಲಾಖೆಯ ಯೋಜನೆಗಳಾದ ಸುಕನ್ಯಾ ಸಮೃದ್ದಿ ಖಾತೆ ಹಾಗು ಪಿಪಿಎಫ್ ಖಾತೆಗಳ ಪಾಸ್ ಪುಸ್ತಕವನ್ನು ವಿತರಿಸಲಾಯಿತು.

ಈ ಖಾತೆಗಳನ್ನು ತೆರೆಯಲು ಸಹಕರಿಸಿದ ದಾನಿಗಳಾದ ಉದ್ದಿನಹಿತ್ಲು ವೈಷ್ಣವಿ ಲೇಔಟ್ ನ ಕೃಷ್ಣ ಕೋಟ್ಯಾನ್ ಮತ್ತು ಸತೀಶ್ ಕುಂದರ್ ರವರಿಗೆ ಧನ್ಯವಾದ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಚಿತ್ರಾ ಶೆಟ್ಟಿಗಾರ್,ಅರುಣ್ ಕುಮಾರ್ ಉದ್ದಿನ ಹಿತ್ಲು, ಮಕ್ಕಳ ಹೆತ್ತವರು ಹಾಗು ಉಡುಪಿ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply