ಬ್ರಹ್ಮಾವರ ಸಕ್ಕರೆ ಕಾರ್ಖಾನೆ: 2ಲಕ್ಷ ಕಬ್ಬಿನ ಸಸಿ ವಿತರಣೆ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಕಬ್ಬಿನ ಕೃಷಿಯಲ್ಲಿ ಕ್ರಾಂತಿ ಮಾಡುವ ಸಲುವಾಗಿ ರೈತರಿಗೆ ಕಾರ್ಖಾನೆಯ ವತಿಯಿಂದ ಉಚಿತವಾಗಿ 2ಲಕ್ಷ ಕಬ್ಬಿನ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಹಾವೇರಿಯಿಂದ ನೀರಾ 86032 ಮಾದರಿಯ ಉತ್ತಮ ತಳಿಯ ಸಸಿಯನ್ನು ತಂದು ವಿತರಣೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ,ಪೆಜಮಂಗೂರು , ನಡೂರು, ಬಾರ್ಕೂರು ,ಉಚ್ಚಿಲ , ಮಡಿ ,ಅಂಪಾರು ,ವಂಡ್ಸೆ ,ಇನ್ನ ,ಹಿರಿಯಡ್ಕ, ಬೆಳ್ಳಂಪಳ್ಳಿ, ಅಲ್ತಾರು, ಪೆರ್ಡೂರು ಮುಂತಾದ ಗ್ರಾಮಗಳ ರೈತರಿಗೆ ಈಗಾಗಲೇ ವಿತರಣೆ ಮಾಡಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply