ಸುಗಮ ಸಂಗೀತ, ಭಾವಗೀತೆ, ಹಾಗೂ ರಂಗಗೀತೆ ಗಳ, ಮೂರು ದಿವಸಗಳ ತರಬೇತಿ ಶಿಬಿರದ ಉದ್ಘಾಟನೆ

ನೃತ್ಯನಿಕೇತನ ಕೊಡವೂರು ಮತ್ತು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸುಗಮ ಸಂಗೀತ, ಭಾವಗೀತೆ, ಹಾಗೂ ರಂಗಗೀತೆ ಗಳ, ಮೂರು ದಿವಸಗಳ ತರಬೇತಿ ಶಿಬಿರದ ಉದ್ಘಾಟನೆಯನ್ನು ರಂಗಕರ್ಮಿ, ಸಂಗೀತ ನಿರ್ದೇಶಕ ಶ್ರೀ ಗುರುರಾಜ ಮಾರ್ಪಳ್ಳಿಯವರು ಮಾಡಿದರು.

ಹೊಸತನದ ಪ್ರಯತ್ನ ದೊಂದಿಗೆ ಯಾರೂ ಇದುವರೆಗೂ ಆಯ್ದುಕೊಳ್ಳದ ಅಜ್ಞಾತ ಕವಿಗಳ ಹಾಡುಗಳನ್ನು ಆಯ್ಕೆಮಾಡಿ ಅದಕ್ಕೆ ರಾಗಸಂಯೋಜನೆ ಮಾಡಿ ನಮ್ಮ ಮುಂದಿ‌ನ ಪೀಳಿಗೆಗೆ ಅದನ್ನು ತಲುಪಿಸುವ ಪ್ರಯತ್ನ ಮಾಡಬೇಕು ಎಂದರು.

ಸಭಾಅಧ್ಯಕ್ಷತೆಯನ್ನು ಪ್ರೊ|| ಮುರಳೀಧರ ಉಪಾಧ್ಯ ವಹಿಸಿದ್ದರು. ಅತಿಥಿಗಳಾಗಿ ಹಿರಿಯ ಉದ್ಯಮಿ ವಿಶ್ವನಾಥ ಶೆಣೈ, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಉಪಸ್ಥಿತರಿದ್ದರು. ಭಾವನ ಕೆರೆಮಠ ನಿರೂಪಿಸಿದ ಕಾರ್ಯಕ್ಮೆ ವಿದ್ವಾನ್ ಸುಧೀರ್ ಕೊಡವೂರು ಸ್ವಾಗತಿಸಿ, ವಂದಿಸಿದರು

 
 
 
 
 
 
 
 
 
 
 

Leave a Reply