ತುಮಕೂರು: ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅಳುವ ಛಾಳಿ ದೇವೇಗೌಡರಿಂದ ಕುಮಾರಸ್ವಾಮಿಗೆ ಬಳುವಳಿಯಾಗಿ ಬಂದಿದೆ ಎಂದು ಸಿದ್ದರಾಮಯ್ಯನವರನ್ನು ಲೇವಡಿ ಮಾಡಿದ್ದಾರೆ. ಇತ್ತೀಚಿಗೆ ಶಿರಾದಲ್ಲಿ ನಡೆದ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಶಿರಾ ನಮ್ಮ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆ.
ನೀವು ಇಲ್ಲಿನ ಜನತೆ ವಿಷ ಕೊಡುತ್ತಿರೊ ಹಾಲು ಕೊಡುತ್ತಿರೊ ಎಂದು ಮತದಾರರನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಛೇಡಿಸಿದ್ದಾರೆ. ಆದರೆ ಶಿರಾ ಮತದಾರರು ಬುದ್ಧಿವಂತರು ಇವರ ಮೊಸಳೆ ಕಣ್ಣೀರಿಗೆ ಮರಳಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.