ಟೈಲ್ಸ್ ಸಹ ಬಿಡದೇ ಇಡೀ ಬಸ್ ನಿಲ್ದಾಣವನ್ನೇ ಕದ್ದ ಖತರ್ನಾಕ್ ಕಳ್ಳರು!

ಖತರ್ನಾಕ್ ಕಳ್ಳರು ಬಸ್ ನಿಲ್ದಾಣವನ್ನೇ ಕಳ್ಳತನ ಮಾಡಿರುವ  ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ತಿನೈಘಾಟ ಸಮೀಪದ ಪಿರೆಗಾಳಿಯಲ್ಲಿ ನಡೆದಿದೆ.

ಜೋಯಿಡಾ ತಾಲೂಕಿನ ಹಲವು ಕಡೆ ರುಡ್ ಸೆಟ್ ಸಂಸ್ಥೆಯವರು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಿದ್ದರು. ಅದರಂತೆ 3 ವರ್ಷದ ಹಿಂದೆ 2 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದ ಪೈಪ್ ಹಾಗೂ ಸ್ಟೀಲ್ ಕಂಬಿಗಳನ್ನು ಬಳಸಿ ತಿನೈಘಾಟ್‌ನ ಪಿರೆಗಾಳಿ ಗ್ರಾಮದಲ್ಲಿಯೂ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. 

ಆದರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಾರಂಭವಾದ ಬಳಿಕ ಬಸ್ ನಿಲ್ದಾಣ ಮುಖ್ಯರಸ್ತೆಯಿಂದ ದೂರವಾಗಿತ್ತು. ಬಳಿಕ ಈ ನಿಲ್ದಾಣಕ್ಕೆ ಪ್ರಯಾಣಿಕರು ಬಂದು ನಿಲ್ಲುವುದು ಕಡಿಮೆಯಾಯಿತು. ಹೀಗಾಗಿ ಈ ಅವಕಾಶವನ್ನು ಬಳಸಿಕೊಂಡ ಕಳ್ಳರು ನಿಲ್ದಾಣದ ಕಬ್ಬಿಣದ ಪೈಪ್ ಸೇರಿ ನೆಲಕ್ಕೆ ಹಾಕಿದ ಟೈಲ್ಸ್ ಸಹ ಬಿಡದೇ ಇಡೀ ನಿಲ್ದಾಣವನ್ನು ಕದ್ದು ಪರಾರಿಯಾಗಿದ್ದಾರೆ. ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಾಕಿದ ಕಬ್ಬಿಣವನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ.

 
 
 
 
 
 
 
 
 
 
 

Leave a Reply