ಉಪ ಮುಖ್ಯಮಂತ್ರಿಯಾಗುವ ಧಾವಂತದಲ್ಲಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು: ದೆಹಲಿಗೆ ತೆರಳುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಹೀಗೆ ಹೇಳಿದ ಬಳಿಕ ಹಲವು ಶಾಸಕರು ಸಚಿವ ಪದವಿಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಉಪ ಮುಖ್ಯಮಂತ್ರಿ ಹುದ್ದೆಗೆ ಬಡ್ತಿ ಪಡೆಯುವ ಹಪಹಪಿಕೆಯಲ್ಲಿದ್ದಂತೆ ತೋರುತ್ತದೆ. ಇನ್ನು ಅವರು ಸಿಎಂ ಅಧಿಕೃತ ನಿವಾಸ ’ ಕಾವೇರಿ’ಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮಂಗಳವಾರ 15 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಈ ವಿಷಯಕ್ಕೆ ಮತ್ತಷ್ಟು ಬಲ ನೀಡಿದೆ .

ಈಗಾಗಲೇ ಡಿಸಿಎಂ ಆಗಲೇಬೇಕೆಂಬ ಆಕಾಂಕ್ಷೆಯಿಂದ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದಲ್ಲದೆ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕ ಹೇಳಿಸಿ ಮತ್ತೊಮ್ಮೆ ಬಿಎಸ್ ವೈ ಮುಂದೆ ಈ ಬೇಡಿಕೆಯಿಡಲು ಭೇಟಿಯಾಗಿದ್ದರು. ಇದಲ್ಲದೆ, ಆಪ್ತರಾದ ಎಚ್.ವಿಶ್ವನಾಥ್, ಸಿ ಪಿ.ಯೋಗೇಶ್ವರ ಪರವಾಗಿಯು ಮಾತನಾಡಿದ್ದು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

 
 
 
 
 
 
 
 
 
 
 

Leave a Reply