ಶಾಸಕ ರಘುಪತಿ ಭಟ್ ಗೆ ಕೊಡವೂರು ಜನತೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ

ಉಡುಪಿ: ಕೊಡವೂರು ಗ್ರಾಮದ ಜುಮಾದಿ ನಗರದಲ್ಲಿನ‌ ಸರಕಾರಿ ಜಾಗವನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್ ನ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ ವರ್ಗಾಯಿಸಿದ್ದನ್ನು ಖಂಡಿಸಿ ಸದ್ರಿ ಸರಕಾರಿ ಆಸ್ತಿಯನ್ನು ಸರಕಾರದ ಹೆಸರಿಗೆ ಡಿನೋಟಿಫೈ ಮಾಡುವಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮುಖಾಂತರ ಯಶಸ್ವಿಯಾದ ಶಾಸಕ ಕೆ. ರಘುಪತಿ ಭಟ್ ಗೆ ಕೊಡವೂರು ಜನತೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕೊಡವೂರು ನಗರ ಸಭಾ ಸದಸ್ಯ ವಿಜಯ ಕೊಡವೂರು, ಹಿರಿಯ ಕೆ.ಟಿ.ಪೂಜಾರಿ, ಸುಭಾಸ್ ಮೆಂಡನ್ , ಅಣ್ಣಪ್ಪ ಶೆಟ್ಟಿ, ಭಾಸ್ಕರ್ ಶೇರಿಗಾರ್, ರವಿರಾಜ್ ಕೊಡವೂರು, ಚಂದ್ರಕಾಂತ್ ಶೆಟ್ಟಿಗಾರ್, ರವಿರಾಜ್ ಸುವರ್ಣ, ‌ದೀಪಕ್ ದೇವಾಡಿಗ, ದಿನೇಶ್ ಕೊಡವೂರು ತಾ.ಪಂ. ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ ಮತ್ತಿತರರು ಉಪಸ್ತಿತರಿದ್ದರು.

 
 
 
 
 
 
 
 
 
 
 

Leave a Reply