ರಾಜ್ಯದಲ್ಲಿ ಮುಂದಿನ 6 ತಿಂಗಳು ಯಾವುದೇ ಚುನಾವಣೆ ಇಲ್ಲಾ- ಸಿಎಂ ಯಡಿಯೂರಪ್ಪ

ಬೆಂಗಳೂರು : ನಾಳೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ ಇನ್ನೂ ಆರು ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ಜೂನ್ ದಲ್ಲಿ ನಡೆಯುತ್ತವೆ ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಪೂರಕವಾಗಿಯೇ ಮಾಹಿತಿಯನ್ನ ಪಡೆದು, ಬಹಿರಂಗವನ್ನೂ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಕ್ಷೇತ್ರ ವಿಂಗಡಣೆಗಳು ನಡೆದಿದ್ದವು.ಇದೀಗ ಸಿಎಂ ಯಡಿಯೂರಪ್ಪರ ಹೇಳಿಕೆಯ ನಂತರ ಚುನಾವಣಾ ಆಕಾಂಕ್ಷಿಗಳು ಆರು ತಿಂಗಳು ಅನಿವಾರ್ಯವಾಗಿ ಕಾಯಲೇಬೇಕಾದ ಸ್ಥಿತಿ ಎದುರಾಗಿದೆ.

 
 
 
 
 
 
 
 
 

Leave a Reply