ಸರಳವಾಗಿ ನಡೆಯಿತು ಮೇಘನಾ ರಾಜ್ ಸರ್ಜಾರವರ ಸೀಮಂತ ಶಾಸ್ರ

ಬೆಂಗಳೂರು: ಚಂದನವನದ ತಾರಾ ಜೋಡಿ ಯುವ ನಟ ದಿ. ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್​ ತಮ್ಮ ಮಗುವಿನ ನೀರಿಕ್ಷೆಯಲ್ಲಿದ್ದರು. ಆದರೆ ಚಿರುವಿನ ಅಕಾಲಿಕ ಮರಣ ಎಲ್ಲರಲ್ಲೂ ನೋವುಂಟು ಮಾಡಿತ್ತು. ಸದ್ಯ ತುಂಬು ಗರ್ಭಿಣಿ ಮೇಘನಾಗೆ ಭಾನುವಾರ ಸೀಮಂತ ಶಾಸ್ತ್ರ ನಡೆದಿದೆ.

ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ರುವ ಕಾರಣ, ಸರಳವಾಗಿ ಸೀಮಂತ ಶಾಸ್ತ್ರ ನೆರವೇರಿ ಸಲಾಗಿದ್ದು, ಕುಟುಂಬದ ಆಪ್ತರಷ್ಟೇ ಈ ಸಮಾರಂಭ ದಲ್ಲಿದ್ದರು.

2018ರಲ್ಲಿ ಚಿರು ಮತ್ತು ಮೇಘನಾ ಇಬ್ಬರೂ ದಾಂಪತ್ಯ ಜೀವನ ಖುಷಿಯಿಂದ ಪ್ರಾರಂಭಿಸಿದ್ದರು. ಮದುವೆ ಯಾಗಿ ಎರಡೇ ವರ್ಷಕ್ಕೆ ಅಂದರೆ 2020ರ ಜೂನ್​ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತ ದಿಂದ ನಿಧನರಾಗಿದ್ದು, ಅಂದಿನಿಂದ ದುಃಖದ ಮಡುವಿ ನಲ್ಲೇ ಇರುವ ಎರಡೂ ಕುಟುಂಬ ಚಿರು ಮಗುವಿನ ಆಗಮನಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೆ.

ಇನ್ನು ಇಂದು ಸೀಮಂತದಲ್ಲಿ ಪತಿಯ ದೊಡ್ಡ ಕಟೌಟ್​ ಅನ್ನು ಪಕ್ಕದಲ್ಲೇ ಇರಿಸಿಕೊಂಡು ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಆ ಮೂಲಕ ಚಿರು ತನ್ನೊಂದಿಗೆ ಇದ್ದಾರೆ ಎಂಬ ಭಾವನೆಯಲ್ಲಿದ್ದಾರೆ.

 
 
 
 
 
 
 
 
 
 
 

Leave a Reply