ದೇವಾಲಯಗಳಲ್ಲಿ ಜಾತ್ರೆ ಉತ್ಸವಗಳು | ಬ್ರಹ್ಮರಥೋತ್ಸವ | ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವ ನಡೆಸುವುದನ್ನು ತಾತ್ಕಾರವಾಗಿ ಮುಂದೂಡಲಾಗಿದೆ. ಸದರಿ ಉತ್ಸವಗಳನ್ನು ನಿಲ್ಲಿಸಿ ಸಂಪ್ರದಾಯವಿಲ್ಲ. ದೇವಾಲಯಗಳಲ್ಲಿ ಜಾತ್ರೆ ಉತ್ಸವ | ಬ್ರಹ್ಮರಥೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ದೇವಾಲಯದ ಆಗಮಿಕರು / ತಂತ್ರಿಗಳು | ಅರ್ಚಕರು / ಸಿಬ್ಬಂದಿಯವರು ಸಾಂಕೇತಿಕವಾಗಿ ನಡೆಸಿ ಕೇವಲ ಉತ್ಸವಗಳನ್ನು ದೇವಾಲಯದ ಆವರಣ | ಒಳಪ್ರಕಾರದೊಳಗೆ ಉತ್ಸವ ದಿನಗಳಲ್ಲಿ ಭಕ್ತಾಧಿಗಳು / ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸುವುದು.
ಕೋವಿಡ್-9 (ಕರೋನಾ ವೈರಸ್) ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ / ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಈ ಕಛೇರಿಯ ನಿರ್ದೇಶನ ಗಳಂತೆ ಸಾಮಾಜಿಕ ಅಂತರ ಹಾಗೂ ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಆಯಾಯ ಜಿಲ್ಲಾಧಿಕಾರಿಗಳು / ಸ್ಥಳೀಯ ಸಂಸ್ಥೆಗಳು ಹೊರಡಿಸಿರುವ | ಹೊರಡಿಸುವ ಆದೇಶಗಳನ್ನು ಪಾಲಿಸತಕ್ಕದ್ದು.
ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಾಗೂ ಸ್ಯಾನಿಟೈಸರ್, ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳ | ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರುಗಳು ಕಾತರಿಪಡಿಸಿಕೊಳ್ಳ ತಕ್ಕದ್ದು ಹಾಗೂ ಮೇಲ್ಕಂಡ ನಿರ್ದೇಶನಗಳು ಉಲ್ಲಂಘನೆ ನಡೆಸದಂತೆ ಆದೇಶ ನೀಡಲಾಗಿದೆ.