ಏಪ್ರಿಲ್ 17 ರಿಂದ ವಿದ್ಯಾವಿಕಾಸ ಮತ್ತು ಬುನಾದಿ ಶಿಕ್ಷಣ ಶಿಬಿರ

ಪಾಂಡುರಂಗ ರಮಣ ನಾಯಕ‌ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಆಯೋಜಿಸಿದ ರಾಜ್ಯ ಮಟ್ಟದ ಪ್ರಶಿಕ್ಷಣ ಶಿಬಿರ ನಡೆಯಲಿದೆ. ಏಪ್ರಿಲ್ 17 ಸೋಮವಾರದಿಂದ ಏಪ್ರಿಲ್ 27 ಗುರುವಾರದವರೆಗೆ ವಿದ್ಯಾ ವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗ ನಡೆಯಲಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 300 ಶಿಕ್ಷಕರು ಭಾಗವಹಿಸಲಿದ್ದಾರೆ.ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರು ತರಬೇತಿ ವರ್ಗದಲ್ಲಿ ಪಾಲ್ಗೊಳ್ಳವರು.ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರ ಸಹ ಸಂಘಟನಾ ಕಾರ್ಯದರ್ಶಿ ಶ್ರೀ .ಜಿ ಆರ್ ಜಗದೀಶ್ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಅಧ್ಯಕ್ಷರು ಶ್ರೀ ಪರಮೇಶ್ವರ ಹೆಗಡೆ ,ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಶ್ರೀ ವಸಂತ ಮಾಧವ , ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರ ಶಿಶುವಾಟಿಕಾ ಸಹ ಪ್ರಮುಖ್ ಶ್ರೀಮತಿ ತಾರ.ಕೆ ಮತ್ತು ಪ್ರಾಂತ ಶಿಶುವಾಟಿಕಾ ಪ್ರಮುಖ್ ಶ್ರೀಮತಿ ಸ್ವರ್ಣ , ಶ್ರೀ ಉಮೇಶ್ ಎಮ್ ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ , ಪ್ರಾಂತ ಪ್ರಶಿಕ್ಷಣ ಪ್ರಮುಖ್ ಶ್ರೀ ನರಸಪ್ಪ , ಪ್ರಾಂತ ಕೋಶಾಧಿಕಾರಿ ಶ್ರೀ ರಾಮಕೃಷ್ಣ ಬಿ ಕೆ ಉಪಸ್ಥಿತರಿರುವರು. ಶೈಕ್ಷಣಿಕ ,ಯೋಗ , ವಿದ್ಯಾಭಾರತಿ ಪ್ರಾರ್ಥನೆ , ಪರೀಕ್ಷೆ , ಮೌಲ್ಯಮಾಪನ , ಶಿಕ್ಷಕರ ಮನೋಭಾವ ಮುಂತಾದ ಹಲವು ವಿಷಯಗಳ ಬೌದ್ಧಿಕ ನೀಡಲು ರಾಜ್ಯ ಮಟ್ಟದ , ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಆಗಮಿಸುವರು ಎಂದು ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಗುರುದಾಸ ಶೆಣೈ ಅವರು ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply