ಹಸೆಮಣೆ ಏರಬೇಕಿದ್ದ ವರ ಮಸಣ ಸೇರಿದ

ಬೆಂಗಳೂರು:ಹಸೆಮಣೆ ಏರಬೇಕಿದ್ದ 28 ವರ್ಷದ ಯುವಕ ಕೊರೊನಾ ಹಿನ್ನೆಲೆ ಮಸಣ ಸೇರುವಂತಾಗಿದೆ. ಹೌದು ಮುಂದಿನ ತಿಂಗಳು ಮದುವೆ ಮಾಡಬೇಕು ಎಂಬ ಯೋಜನೆಯಲ್ಲಿದ್ದ ಕುಟುಂಬಕ್ಕೆ ಕೊರೊನಾ ಬಿಗ್ ಶಾಕ್ ನೀಡಿದೆ.

ಕೊರೊನಾಗೆ ಬಲಿಯಾದ ಯುವಕ ಸಾಗರ್ ಎ.ಜಿ (28) . ಐಸಿಯು ಬೆಡ್ ಮತ್ತು ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾನೆ. ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಗರ್ ಕಳೆದ 2 ತಿಂಗಳ ಹಿಂದೆ ಮದುವೆ ಬಗ್ಗೆ ಮಾತುಕತೆ ನಡೆದು ನಿಶ್ಚತಾರ್ಥ ಮಾಡದೆ ಕೇವಲ ಸರಳ ಮದುವೆಗೆ ಯೋಜನೆ ಮಾಡಲಾಗಿತ್ತು. ಅಷ್ಟರಲ್ಲಿ ಕೊರೊನಾ ಸಾಗರ್ ನನ್ನು ತನ್ನ ಬಲಿಯಾಗಿಸಿಕೊಂಡಿದೆ.ಈತನ ಕೋವಿಡ್ ವರದಿ ಮೊದಲು ನೆಗೆಟಿವ್ ಬಂದಿದ್ದು, ಬಳಿಕ ಪಾಸಿಟಿವ್ ಬಂದಿದೆ.ಸೀರಿಯಸ್ ಕಂಡಿಷನ್ ನಲ್ಲಿದ್ದ ಸಾಗರ್ ಕೊರೊನಾಗೆ ಬಲಿಯಾಗಿದ್ದಾನೆ. 

ಕುಟುಂಬಸ್ಥರು ನಮಗಾದ ರೀತಿ ಯಾರಿಗೂ ಆಗದಿರಲಿ ಎಂದು ಅಳಲು ತೋಡಿಕೊಂಡಿದ್ದಾರೆ. 78 ವರ್ಷದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. 28 ವರ್ಷದ ನಮ್ಮ ಪುತ್ರನಿಗೆ ಚಿಕಿತ್ಸೆ ಇಲ್ಲ. ಸರ್ಕಾರದ ವಿರುದ್ಧ ಮೃತನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply