ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಿತಿ ಹಿನ್ನೆಲೆ ಸಿಎಂರನ್ನು ಭೇಟಿಯಾದ ಫಿಲ್ಮ್ ಚೇಂಬರ್ ನಿಯೋಗ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಿತಿ ಎಂದು ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಕೋರಿ ಫಿಲ್ಮ್ ಚೇಂಬರ್ ನಿಯೋಗ ಸಿಎಂಗೆ ಮನವಿ ಮಾಡಿದೆ.

ಸಿಎಂ ಬಿಎಸ್​ವೈ ಭೇಟಿ‌ ಮಾಡಿದ ಚಿತ್ರರಂಗದ ನಿಯೋಗ, ಥಿಯೇಟರ್​​ಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಭರ್ತಿಗೆ ಮನವಿ ಮಾಡಿತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಸಿಎಂರನ್ನು ಭೇಟಿ ಮಾಡಿ ಶೇ.50ರಷ್ಟು ಮಾತ್ರ ಅವಕಾಶ ನೀಡಿದರೆ ನಿರ್ಮಾಪಕರಿಗೆ ನಷ್ಟವಾಗಲಿದೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.

ಈ ಹಿಂದೆಯಾದ ಲಾಕ್‌ಡೌನ್ ನಿಂದಲೇ ಚಿತ್ರರಂಗ ನಷ್ಟ ಅನುಭವಿಸುತ್ತಿದ್ದು, ಈಗೀಗ ಚೇತರಿಕೆ ಕಾಣುತ್ತಿದೆ. ಈಗ ಏಕಾಏಕಿ ಶೇ.50ರಷ್ಟು ಮಿತಿ ಹೇರಿದರೆ ಚಿತ್ರರಂಗ ಮತ್ತೆ ದೊಡ್ಡ ನಷ್ಟ ಅನುಭವಿಸಲಿದೆ. ಹೀಗಾಗಿ, ಈ ಆದೇಶವನ್ನು ಹಿಂಪಡೆಯುವಂತೆ ಸಿಎಂಗೆ ಮನವಿ ಮಾಡಿದರು.

 
 
 
 
 
 
 
 
 
 
 

Leave a Reply