ಉಡುಪಿ : ಶ್ರೀ ಕೃಷ್ಣಮಠಕ್ಕೆ, ಸಾಗರ ಹೆಗ್ಗೋಡಿನ ಚರಕ ಸಂಸ್ಥೆಯ ಸದಸ್ಯರು ಪವಿತ್ರ ವಸ್ತ್ರ ಅಭಿಯಾನದ ಅಂಗವಾಗಿ, ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಟ ಮಠಗಳಿಗೆ ಭೇಟಿನೀಡಿ, ಮಠಾಧೀಶರಿಗೆ ಪವಿತ್ರ ವಸ್ತ್ರ (ಮಣ್ಣಿನ ಬಣ್ಣದ ಕೈಮಗ್ಗದ ವಸ್ತ್ರ) ವನ್ನು ನೀಡಿದರು.
ಕೈಮಗ್ಗದ ಕಾಷಾಯ ವಸ್ತ್ರ ಉಪಯೋಗಿಸುವುದರ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಕೈ ಉತ್ಪಾದಕರನ್ನು ಬೆಂಬಲಿಸಬೇಕು ಎಂದು ಕೋರಿದರು. ಹಾಗೂ ಅವರ ಅನುಯಾಯಿಗಳಿಗೂ ಕೈ ಉತ್ಪನ್ನ ಬಳಸಲು ಕರೆ ನೀಡಲು ಕೇಳಿ ಕೊಳ್ಳಲಾಯಿತು.
ಪರ್ಯಾಯ ಪೀಠಾಧೀಶರಾದ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಗಳು ಹಾಗೂ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಗಳು ಸ್ಪಂದಿಸಿ ಕೈ ಉತ್ಪನ್ನ ಗಳಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಅಭಿಯಾನದ ಮುಂದಿನ ಭಾಗವಾದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಸೆ.13 ರಿಂದ 16 ರವರೆಗೆ ಮಠದ ಆವರಣದಲ್ಲಿ ನಡೆಯಲಿದ್ದು, ಅವಕಾಶ ಮಾಡಿಕೊಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.