ಭಾರತೀಯ ಅಂಚೆ ಇಲಾಖೆಯಿಂದ ಟೀಚರ್ಸ್ ಡೇ ಸ್ಪೆಶಲ್…

ಪ್ರಸಿದ್ಧ ಶಿಕ್ಷಣ ತಜ್ಞ, ಹೆಸರಾಂತ ದಾರ್ಶನಿಕ, ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿ ದಿ.‌ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನವನ್ನು ಭಾರತದಾದ್ಯಂತ ಶಿಕ್ಷಕರ ದಿನ ಅಂದರೆ ಟೀಚರ್ಸ್ ಡೇ ಎಂದು ಆಚರಿಸುವುದು 1962 ರಿಂದಲೂ ಪ್ರಚಲಿತವಿರುವ ಪರಿಪಾಠ. ನಮ್ಮ ಜೀವನವನ್ನು ರೂಪಿಸುವ, ರೂಪಿಸಿದ ಗುರುವಿನಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳನ್ನು ಕಾಣುವ, ಅವರನ್ನು‌ ಪೂಜಿಸುವ, ಅವರನ್ನು ಆರಾಧಿಸುವ , ಅವರನ್ನು ಗೌರವಿಸುವ ಸತ್ ಸಂಪ್ರದಾಯ ನಮ್ಮದು. ಇದೀಗ ಈ ಒಂದು ಸಂಪ್ರದಾಯಕ್ಕೆ ಶತ ಶತಮಾನಗಳ ಇತಿಹಾಸವಿರುವ ಭಾರತೀಯ ಅಂಚೆ ಇಲಾಖೆ ವಿಶಿಷ್ಟ ರೀತಿಯಲ್ಲಿ ತನ್ನ ಕೊಡುಗೆ ನೀಡಿದೆ.
ಬದಲಾಗುತ್ತಿರುವ ಜಗತ್ತಿಗೆ ತನ್ನನ್ನು ಬದಲಾಯಿಸಿಕೊಳ್ಳುತ್ತಾ, ಆಧುನಿಕತೆಯನ್ನು ಮೈಗೂಡಿಸಿಕೊಂಡು, ತಾಂತ್ರಿಕತೆಯನ್ನು ಅಳವ ಡಿಸಿ ಕೊಂಡು ‍ ನವ್ಯ ರೀತಿಯ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುವಲ್ಲಿ‌ ಯಶಸ್ಸಿನ ಹೆಜ್ಜೆ ಇಟ್ಟಿದೆ. ಕೊರೋನಾ ಮಹಾ ಮಾರಿ ಅತಿ ವೇಗವಾಗಿ ಹರಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯೊಳಗೇ ಕುಳಿತು  ರಾಖಿ ಪೋಸ್ಟ್ ಮುಖಾಂತರ ನಮ್ಮ ದೇಶ   ದಾದ್ಯಂತ ಸಹೋದರರಿಗೆ, ಸೈನಿಕರಿಗೆ ರಾಖಿ ಕಳುಹಿಸುವ ವಿನೂತನ ವಿಧಾನದ ಯಶಸ್ಸಿನ ಬಳಿಕ ಇದೀಗ ಕರ್ನಾಟಕ ಅಂಚೆ ವೃತ್ತವು ಶಿಕ್ಷಕರ ದಿನಕ್ಕೆ ” ಗುರು ವಂದನಾ” ಎಂಬ ವಿಶೇಷ ಪರಿಕಲ್ಪನೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್  ಶ್ರೀಮತಿ ಶಾರದಾ ಸಂಪತ್ ರವರು ಬೆಂಗಳೂರಲ್ಲಿ ಲೋಕಾರ್ಪಣೆಗೊಳಿಸಿದರು‌. 
ತಮ್ಮ ಜೀವನವನ್ನು ರೂಪಿಸಿದ ಗುರುಗಳಿಗೆ ಗುರುವಂದನೆಯನ್ನು ಸಲ್ಲಿಸುತ್ತ ಅವರಿಗೆ ತಮ್ಮ ಪ್ರೀತಿ, ಗೌರವ ಆದರದ ದ್ಯೋತಕ ವಾಗಿ ಕಿರುಕಾಣಿಕೆಯನ್ನು ನೀಡಿ ಅವರ ಆದರ್ಶ ನಮಗೆ ದಾರಿದೀಪವಾಗಲೆಂದು ಹಾರೈಸಿ, ಅವರ ಆಶೀರ್ವಾದವನ್ನು ಪಡೆಯುವ ಈ ಪ್ರಕ್ರಿಯೆಯನ್ನು ಮನೆಯ ಒಳಗೇ ಕುಳಿತು ಸುಲಭ ವಿಧಾನದಲ್ಲಿ ಮಾಡಲು ಯೋಜನೆ, ಯೋಚನೆಗಳನ್ನು ನಮ್ಮ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ರೂಪಿಸಿದೆ.  ಶಾಲಾಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನಲೆಯಲ್ಲಿ ಗುರು ವಂದನೆ ಸಲ್ಲಿಸಲು ಈ ಸೇವಾ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ.
Karnatakapost.gov.in  ಮುಖಾಂತರ ನಮ್ಮ ದೇಶ ಮಾತ್ರವಲ್ಲದೆ ಹೊರದೇಶದ ಲ್ಲಿರುವವರೂ ಭಾರತದ ಯಾವುದೇ ಪ್ರದೇಶದಲ್ಲಿರುವ ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾಗಿದೆ‌. ಬಹು ಸುಲಭವಾಗಿ, ಬಲು ತ್ವರಿತವಾಗಿ ಕೇವಲ 100/- ರೂ ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ https://karnatakapost.gov.in/ Guru_Vandana ಇದಕ್ಕೆ ಲಾಗಿನ್ ಆಗಿ ಶುಲ್ಕವನ್ನು  ಅಂತರ್ಜಾಲ ಬ್ಯಾಂಕಿಂಗ್, ನಮ್ಮ ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ, ಮುಂತಾದ ವಿಧಾನಗಳಿಂದ  ಪಾವತಿಸಬಹುದಾಗಿದ್ದು ಅದರ ಯುಟಿಆರ್ ಕ್ರಮಸಂಖ್ಯೆಯನ್ನು ಹಾಕಿ ಮುಂದುವರೆದು  ಕಳುಹಿ ಸುವವರ ಪೂರ್ಣ ವಿವರಗಳನ್ನು ನೀಡಬೇಕು. 
ಹಾಗೇ ಮುಂದುವರೆದಾಗ  ಶಿಕ್ಷಕರಿಗೆ ಕಳುಹಿಸಲು ಸುಮಾರು ಮೂರು ವಿಧದ ಆಕರ್ಷಕ ಕೊಡುಗೆಗಳಾದ ಖಾದಿ ಫೇಸ್ ಮಾಸ್ಕ್, ಸೀಡ್ ಪೆನ್ಸಿಲ್ ಹಾಗು ಬುಕ್ ಮಾರ್ಕ್ ಗಳು ವೀಕ್ಷಣೆಗೆ ಲಭ್ಯವಿದ್ದು ಪ್ರತಿಯೊಂದು ಕೊಡುಗೆಗಳ‌ ಮುಂದೆ  ವಿನ್ಯಾಸ ಅಂಕಿ ನಮೂದಿ ಸಲಾಗಿದ್ದು ನಮಗೆ ಬೇಕಾದ ಕೊಡುಗೆಗಳನ್ನು ಆರಿಸಿ ಮುಂದುವರೆದಾಗ  ಸಂದೇಶ ಕಳುಹಿಸುವ ಆಯ್ಕೆ ಕಾಣ ಸಿಗುತ್ತದೆ. ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ, ಇಲ್ಲವೇ ನಮಗೆ ಬೇಕಾದ ಸಂದೇಶವನ್ನು ಬರೆದು ಅದರ ಫೋಟೋ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ.  ಶಿಕ್ಷಕರ ದಿನದ ಸಾಮಾನ್ಯ ಸಂದೇಶಗಳು ಅಥವಾ ಡಾ.ಎಸ್ ರಾಧಾಕೃಷ್ಣನ್ ರವರ ಚಿತ್ರ ಹೊತ್ತ ಸಂದೇಶಗಳು ಇಲ್ಲವೇ ಎಪಿಜೆ ಅಬ್ದುಲ್ ಕಲಾಮ್ ರವರ ಚಿತ್ರ ಹೊತ್ತ ಸಂದೇಶಗಳನ್ನು ಆಯ್ಕೆ ಮಾಡಬಹುದಾಗಿದೆ. 
ಕೊನೆಯಲ್ಲಿ ಸ್ವೀಕರಿಸುವವರ ಪೂರ್ಣ ವಿವರಗಳನ್ನು ಬರೆಯುವ ವಿಭಾಗವಿದೆ .ಕೇವಲ 100/-ರೂಪಾಯಿಗಳಲ್ಲಿ  ಆಕರ್ಷಕ ಕೊಡುಗೆಗಳು,ಗುರುವಂದನೆಯ ಅರ್ಥಪೂರ್ಣ ಸಂದೇಶಗಳನ್ನು ಹೊತ್ತು ವಿಶಿಷ್ಟ ವಿನ್ಯಾಸದ  ಗುರುವಂದನಾ ಲಕೋಟೆಗಳಲ್ಲಿ ತಮ್ಮ ನೆಚ್ಚಿನ ಗುರುಗಳನ್ನು ಸೇರುವ ಪರಿಕಲ್ಪನೆ ಶಿಷ್ಯವೃಂದಕ್ಕೆ ಸಂತಸ ಸಡಗರ ತರುವಂತಹದ್ದು. ಗುರುಗಳಿಗೆ ಸಲ್ಲಿಸಲು ಕೊಡುಗೆಗಳ ಸೀಮಿತ ದಾಸ್ತಾನು ಲಭ್ಯವಿದ್ದು ಈ ಸೇವಾ ವಿಧಾನದ ಮೂಲಕ ಗುರುವಂದನೆ ಸಲ್ಲಿಸಲು ಸೆಪ್ಟೆಂಬರ್ ಒಂದರವರೆಗೆ, ಇಲ್ಲವೇ ಕೊಡುಗೆಗಳ ದಾಸ್ತಾನು ಮುಗಿಯುವವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಗುರುವಂದನಾ ಲಕೋಟೆಯು  “ವೇರ್ ಮಾಸ್ಕ್ ಡಿಯರ್ ಟೀಚರ್  ಸ್ಟೇ ಸೇಫ್ “ಎಂಬ ಆಕರ್ಷಕ ಸ್ಲೋಗನ್ ಹಾಗು ಚೆಂದದ ಚಿತ್ರ ವಿನ್ಯಾಸ ಹೊಂದಿದ್ದು ತ್ವರಿತ ಅಂಚೆಯ ಮೂಲಕ ಗುರುಗ ಳನ್ನು ತಲುಪುವಂತೆ ವಿನ್ಯಾಸ ರೂಪಿಸಲಾಗಿದೆ. 
ನಮ್ಮ ದೇಶದ ಯಾವುದೇ ಮೂಲೆಗೂ ಈ ಗುರು ವಂದನಾ ಕೊಡುಗೆ ಕಳುಹಿಸಬಹುದಾಗಿದ್ದು  ಹೊರದೇಶದಲ್ಲಿರುವ ಭಾರತೀಯರು ತಮ್ಮ  ಇಲ್ಲಿನ ಬ್ಯಾಂಕ್ ಖಾತೆಯ ಮೂಲಕ ಭಾರತದೊಳಗಿರುವ ತಮ್ಮ ಗುರುಗಳಿಗೂ ಕೊಡುಗೆ ಕಳುಹಿಸಬಹುದಾಗಿದ್ದು ಮನೆಯೊ ಳಗೇ ಕುಳಿತು ತಮ್ಮ ನೆಚ್ಚಿನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾದ ಕರ್ನಾಟಕ ಅಂಚೆ ವೃತ್ತದ‌ ಈ ಸೇವಾ ಯೋಜನೆ ಜನ ಸಾಮಾನ್ಯರಲ್ಲಿ ಸಂಚಲನ ಮೂಡಿಸಿದೆ.
ಪೂರ್ಣಿಮಾ​ ಜನಾರ್ದನ್ ಕೊಡವೂರು ​

ಟೀಚರ್ಸ್ ಡೇ ಸಂದರ್ಭದಲ್ಲಿ ಗುರುವಂದನಾ ಎಂಬ ವಿಶೇಷ ಆನ್ ಲೈನ್ ಪರಿಕಲ್ಪನೆಯನ್ನು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತ ಇತ್ತೀಚಿಗೆ ಬೆಂಗಳೂರಲ್ಲಿ ಬಿಡುಗಡೆಗೊಳಿಸಿದೆ . ಈ ವಿಶೇಷ ಸೇವಾ ಯೋಜನೆಯ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗಿಸಿ ಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ………. 

ನವೀನ್ ಚಂದರ್, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ.

 
 
 
 
 
 
 
 
 
 
 

Leave a Reply