ಮೂರೇ ದಿನಗಳಲ್ಲೇ ಮುಕ್ತಾಯವಾಗಲಿದೆ ರಾಜ್ಯ ವಿಧಾನಮಂಡಲ ಅಧಿವೇಶನ

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನವನ್ನುಮೂರು ದಿನದಲ್ಲಿ ಮುಕ್ತಾಯಿಸಲು ಸಿ.ಎಂ ಪ್ರಯತ್ನಿಸುತ್ತಿದ್ದಾರೆ.ಹೌದು ಈ ಬಗ್ಗೆ ಹೇಳಿರುವ ಯಡಿಯೂರಪ್ಪ ನವರು ಈಗಾಗಲೇ ಐವತ್ತರಿಂದ ಅರವತ್ತು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ, ಹೀಗಾಗಿ ಶೀಘ್ರದಲ್ಲಿ ಅಧಿವೇಶನ ಮುಗಿಸುವ ಬಗ್ಗೆ ವಿಪಕ್ಷಗಳ ಸಹಕಾರ ಕೋರಿ ಅನಂತರ ಮೂರು ದಿನಗಳೊಳಗೆ ಮುಗಿಸುವ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.

ವಿರೋಧ ಪಕ್ಷಗಳ ಸಹಕಾರ ಹೇಗಿರುತ್ತದೆ ಎಂದು ನೋಡಬೇಕು,ಸದ್ಯ ಕೊರೋನಾ ಕಾರಣಕ್ಕೆ ಬಹಳಷ್ಟು ಮಂದಿ ಬಂದಿಲ್ಲ. ಆರು ಸಚಿವರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ಇನ್ನು ಹಲವು ಶಾಸಕರಿಗೆ ಕೊರೋನಾ ಸೋಂಕು ತಗುಲಿದ್ದು. ಆದಷ್ಟು ಬೇಗ ಅಧಿವೇಶನ ಮುಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply