ಶ್ರೀರಾಮುಲು ಉಪ ಮುಖ್ಯಮಂತ್ರಿ..?

ಬೆಂಗಳೂರು: ತಮ್ಮ ಖಾತೆ ಬದಲಾವಣೆ ಯಿಂದಾಗಿ ಅಸಮಾಧಾನಗೊಂಡಿದ್ದ ಸಚಿವ ಶ್ರೀರಾಮುಲು ಇದೀಗ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ ಮುಂದೆ ಹೊಸ ಬೇಡಿಕೆಯಿಟ್ಟಿದ್ದಾರೆ.

ಖಾತೆ ಬದಲಾವಣೆಯಿಂದ ಮುನಿಸಿ ಕೊಂಡರು ಸದ್ಯ ಸಮಾಧಾನಗೊಂಡಂತಿರುವ ಶ್ರೀರಾಮುಲು ಇದೀಗ ಹೊಸ ಬೇಡಿಕೆ ಯಿಟ್ಟಿದ್ದಾರೆ. ಈ ಬೇಡಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ.


ಆ ಹೊಸ ಬೇಡಿಕೆ ಏನೆಂದರೆ ತಮ್ಮನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು.2018ರ ವಿಧಾನಸಭೆ ಚುನಾವಣೆ ವೇಳೆ ತಮ್ಮನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದು, ಹೀಗಾಗಿ ತಮಗೆ ಅದೇ ಹುದ್ದೆ ನೀಡಬೇಕೆಂದು ಪಟ್ಟು ಹಿಡಿ ದಿದ್ದಾರೆ ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ.

ಈ ಹಿಂದೆ ಇದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಗಳನ್ನು ನನ್ನಿಂದ ಹಿಂಪಡೆಯ ಲಾಗಿದೆ.ಅದರಿಂದ ನನಗೆ ಡಿಸಿಎಂ ಸ್ಥಾನ ವನ್ನಾದರೂ ನೀಡಲೇಬೇಕೆಂದು ಮುಖ್ಯ ಮಂತ್ರಿ ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ನನ್ನನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬುದು ಹಳೆಯ ಬೇಡಿಕೆ. ಈಗಿರುವ ಹೊಸ ಸಮಾಜ ಕಲ್ಯಾಣ ಖಾತೆ ಜತೆಗೆ ಡಿಸಿಎಂ ಹುದ್ದೆಯನ್ನೂ ನಿರ್ವಹಿಸ ಬಲ್ಲೆ ಎಂದು ಶ್ರೀರಾಮುಲು ಯಡಿಯೂರಪ್ಪ ನವರ ಎದುರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

 
 
 
 
 
 
 
 
 

Leave a Reply