ಸಚಿವ ಆರ್. ಅಶೋಕ್ ಬಿಎಸ್. ಯಡಿಯೂರಪ್ಪನವರ ಪರ ಬ್ಯಾಟಿಂಗ್ 

ಬೆಂಗಳೂರು  : ರಾಜ್ಯ ರಾಜಕೀಯದಲ್ಲಿ  ಇದೀಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಚರ್ಚೆಗಳು ನಡೆಯುತ್ತಿವೆ. ಈ ವಿಚಾರವಾಗಿ ಸಚಿವ ಆರ್. ಅಶೋಕ್ ಬಿಎಸ್. ಯಡಿಯೂರಪ್ಪನವರ ಪರವಾಗಿ ನಿಂತಿದ್ದಾರೆ.

ಬಿಎಸ್ ವೈ ಪರವಾಗಿ ಟ್ವೀಟ್ ಮಾಡಿದ ಅಶೋಕ್ ನಾನು ಸಿಎಂ ಅವರಿಗೆ ಬೆಂಬಲ ನೀಡುತ್ತೇನೆ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿಯಿಲ್ಲ. ಮುಂದಿನ ಮೂರು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಪ್ರವಾಹದ ಸಮಯದಲ್ಲಿ ಹಾಗೂ ಸದ್ಯದ ಕೊರೊನಾ ಸೋಂಕಿನ ಸಮಸ್ಯೆಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಶಕ್ತಿಮೀರಿ ನಿರಂತರ ಶ್ರಮಿಸಿದ್ದಾರೆ. ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಾವಣೆ ಪ್ರಶ್ನೆ ಬರುವುದಿಲ್ಲ ಎಂದು ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ

 
 
 
 
 
 
 
 
 

Leave a Reply