ರಾಜ್ಯದ ಚಿತ್ರದುರ್ಗ, ಹಾಸನ ಜಿಲ್ಲಾ, ಕಾರ್ಕಳ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ ಕಾರ್ಯ ನಿರ್ವಹಿಸದಿದ್ದಾಗ ರಾಜ್ಯ ಸಂಘದ ಪರವಾಗಿ ಎಸ್. ಎಸ್. ತೋನ್ಸೆ ಸ್ಥಳೀಯ ಪ್ರತಿನಿಧಿಯೊಂದಿಗೆ ಸೈಕಲಲ್ಲಿ ಕಚೇರಿ, ಕಚೇರಿಗೆ ಹೋಗಿ ಕೆಲವು ದಶಕಗಳ ಹಿಂದೆ ಪ್ರಾರಂಭಿಸಿದ ಸಂಘಟನೆಗಳು ಈಗ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರಕಾರಿ ನೌಕರರ ಸಂಘದ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಯಾಗಿ ಮುಷ್ಕರ, ವಿಧಾನಸೌಧ ಚಲೋ ನೇರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎರಡು ಸಲ, ಸಂಪಂಗಿನಗರ ಮತ್ತು ಮೆಕ್ರಿ ವೃತ್ತ ಠಾಣೆಯಲ್ಲಿ ಒಂದೊಂದು ಸಲ ಹೀಗೆ ನಾಲ್ಕು ಬಾರಿ ಬಂಧಿಸಲ್ಪಟ್ಟಿರುತ್ತಾರೆ. ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಯಾಗಿ ಮೂವತ್ತು ವರ್ಷ, ನಿವೃತ್ತ ನೌಕರರ ಸಂಘದ ಪದಾಧಿಕಾರಿಯಾಗಿ ಇಪ್ಪತ್ತಮೂರು ವರ್ಷ ಕಾರ್ಯ ನಿರ್ವಹಿಸಿದ ಶ್ರೀನಿವಾಸ ಶೆಟ್ಟಿ ತೋನ್ಸೆ ನಿವೃತ್ತ ನೌಕರರ ಸಂಘದ ಪದಾಧಿಕಾರಿ ಹುದ್ದೆಗೆ ಸ್ವಯಂ ಇಚ್ಛೆಯಿಂದ ರಾಜಿನಾಮೆ ನೀಡಿದ್ದಾರೆ.