ಅಂಕೋಲ ಬಳಿ ಕೇಂದ್ರ ಸಚಿವರ ಕಾರು ಅಪಘಾತ : ಪತ್ನಿ ಹಾಗೂ ಪಿಎ ದುರ್ಮರಣ, ಸಚಿವ ಶ್ರೀಪಾದ ನಾಯಕ್ ಸ್ಥಿತಿ ಗಂಭೀರ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಘಟನೆ. ಕೇಂದ್ರ ಆಯುಷ್ ಇಲಾಖೆ ಸಚಿವರಾದ ಶ್ರೀಪಾದ್ ನಾಯಕ್ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ನಡೆದ ಅಪಘಾತ.
ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯ. ಸಚಿವರ ಪತ್ನಿ ಗಂಭೀರ ಗಾಯ ಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವು. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಅಸ್ಪತ್ರೆಗೆ ದಾಖಲು. ಸಚಿವರಿಗೆ ಗಂಭೀರ ಗಾಯ.
ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.