ಶ್ರೀರಾಮಾ ದರ್ಶನಂ (ಮೈಂದ ದಿವಿದ ಕಾಳಗ) ಯಕ್ಷಗಾನ ಪ್ರದರ್ಶನ

ಉಡುಪಿ : ಕುಂಜಿಬೆಟ್ಟಿನ ಅರ್ಚನಾ ಸೊವರಿನ್ ನ ರೂಫ್ ಟಾಪ್ ನಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ, ಅಂಬಲಪಾಡಿ ಇದರ ಬಾಲ ಕಲಾವಿದರಿಂದ ಶ್ರೀರಾಮಾ ದರ್ಶನಂ (ಮೈಂದ ದಿವಿದ ಕಾಳಗ) ನರಸಿಂಹ ತುಂಗರ ನಿರ್ದೇಶನದಲ್ಲಿ ಜ. 7ರಂದು ಪ್ರಸ್ತುತಗೊಂಡಿತು.

ಯಕ್ಷಗಾನದ ಅಭಿಮಾನಿಯಾದ, ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಜನರಲ್ ಮೆನೇಜರ್ ಆಗಿ ನಿವೃತ್ತರಾದ ಪಿ. ಆರ್ .ಶೆಣೈ ತಮ್ಮ ಎಪ್ಪತ್ತೈದನೇ ವರ್ಷದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಯಕ್ಷಗಾನ ಕಲಾರಂಗದ ಸದಸ್ಯರು ದಾನಿಗಳು ಆದ ಪಿ.ಆರ್. ಶೆಣೈ ಹಾಗೂ ಅವರ ಪತ್ನಿಯನ್ನು ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply