“ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021” (ಈಶ ಸೇವೆಯೊಂದಿಗೆ ಕಲಾ ಸೇವೆ}  

ಮಹತೋಬಾರ  ಕೊಡವೂರು ಶ್ರೀ ಶಂಕರನಾರಾಯಣ ರಾಶಿಪೂಜೆ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋ ಗ್ರಾಪರ್ಸ್  ಅಸೋಷಿಯೇಷನ್  ಉಡುಪಿ ವಲಯ ಆಯೋಜಿಸುವ

” ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021″ (ಈಶ ಸೇವೆಯೊಂದಿಗೆ ಕಲಾ ಸೇವೆ}  

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 4,ಗುರುವಾರ ದಂದು ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜಾ ಮಹೋತ್ಸವದ ಚಿತ್ತಾಕರ್ಷಕ ದೃಶ್ಯಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ತಮ್ಮದಾಗಿಸಿ ಕೊಳ್ಳಲೊಂದು ಅಪೂರ್ವ ಅವಕಾಶ. 
ಪ್ರಥಮ~ 3,000-00 +ಸ್ಮರಣಿಕೆ,  ದ್ವಿತೀಯ~ 2,000-00 +ಸ್ಮರಣಿಕೆ,   ತ್ರತೀಯ ~ 1,000-00 +ಸ್ಮರಣಿಕೆ ಹಾಗು  ಎರಡು ಸಮಾಧಾನಕರ ಬಹುಮಾನ.

ಸ್ವರ್ಧಾ ನಿಯಮ ಹಾಗೂ ನಿಬಂಧನೆಗಳು:
@ ಒಬ್ಬರು 8*10 ಗಾತ್ರದ ಗರಿಷ್ಠ ಮೂರು ಛಾಯಾಚಿತ್ರಗಳನ್ನು ಕಳುಹಿಸಬಹುದು.@ ಛಾಯಾಚಿತ್ರದ  ಹಿಂಬದಿ ತಮ್ಮ ಹೆಸರು , ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು .
@ ಧಾರ್ಮಿಕ ವಿಧಿ ವಿಧಾನಗಳಿಗೆ ಯಾವುದೇ ಅಡಚಣೆಯಾಗದಂತೆ ಛಾಯಾಚಿತ್ರಗಳನ್ನು ತೆಗೆಯತಕ್ಕದ್ದು.@ ಛಾಯಾಚಿತ್ರ ತೆಗೆಯುವ ಸಮಯ ಫೆ.4, ಗುರುವಾರ ಸಂಜೆ ಗಂಟೆ 7.00ರಿಂದ ಫೆ. 5, ಶುಕ್ರವಾರ ಬೆಳಿಗ್ಗೆ ಗಂಟೆ 6.00 ವರೆಗೆ ಮಾತ್ರ ದೊಂದಿ ಬೆಳಕಿನ  ಅವಕಾಶವಿರುವುದು.  
@ ನಿರ್ಣಾಯಕರ ತೀರ್ಮಾನವೇ ಅಂತಿಮ.@ ಎಲ್ಲರಿಗೂ ಮುಕ್ತ ಅವಕಾಶ.
@ ಛಾಯಾಚಿತ್ರ ಕಳುಹಿಸಲು ಕೊನೆಯ ದಿನಾಂಕ 15 .02.2021, ಸೋಮವಾರ @ ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ@ ಛಾಯಾಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ-ಶಾಡೋಸ್ ಡಿಜಿಟಲ್ ಕ್ರಿಯೇಶನ್, ಕಸ್ತೂರಿ ಬಿಲ್ಡಿಂಗ್, ಎರಡನೇ ಮಹಡಿ ಶಿರಿಬೀಡು, ಉಡುಪಿ.
@ ಬಹುಮಾನ ವಿತರಣೆ ~ 21. 02.  2021, ಸೋಮವಾರ. ಶ್ರೀದೇವಳದಲ್ಲಿ  @ ಛಾಯಾಚಿತ್ರಗಳನ್ನು ಸಾಧಾರಣ ಅಂಚೆ ಅಥವಾ ತ್ವರಿತ ಅಂಚೆ ಇಲ್ಲವೇ ನೋಂದಾಯಿತ ಅಂಚೆ ಮೂಲಕವೇ ಕಳುಹಿಸಬೇಕು 
ಹೆಚ್ಚಿನ ಮಾಹಿತಿಗಾಗಿ : ಕೊಡವೂರು ಪ್ರಕಾಶ್ ಜಿ.~ 9880058665ಜನಾರ್ದನ್ ಕೊಡವೂರು~ 9448252363ಪ್ರಕಾಶ್ ಕೊಡಂಕೂರು~9880953649ಸುಕೇಶ್ ಅಮೀನ್ ~ 7204146368

 
 
 
 
 
 
 
 
 
 
 

Leave a Reply