ಸುದೀರ್ಘ ಕಾಲದ ಪಾಠನಾನುಭವದ ಭಟ್ಟರು ನಿರಂತರ ನಮ್ಮ ಕಾಲೇಜಿನ ಆಸ್ತಿಯಾಗಬೇಕು. ಅಸದೃಶ ಪಾಂಡಿತ್ಯ ಇನ್ನಷ್ಟು ಜನಮಾನಸವನ್ನು ಬೆಳಗುವಂತಾಗಲಿ. ನಿವೃತ್ತಿಯೆಂಬುದು ಸರಕಾರದ ವತಿಯಿಂದಲೇ ಹೊರತು ಸರ್ವ ರೀತಿಯಿಂದಲ್ಲ ಎಂದು ಅಧ್ಯಕ್ಷತೆಯನ್ನು ವಹಿಸಿದ ಪರ್ಯಾಯ ಪಿಠಾಧೀಶರಾದ ಶ್ರೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಪ್ರಸಿದ್ಧ ಆಗಮ ಪಂಡಿತರಾದ ಪಂಜ ಭಾಸ್ಕರ ಭಟ್ ಮಾತನಾಡಿ ಲಕ್ಷ್ಮೀನಾರಾಯಣ ಭಟ್ಟರು ಕಾಲೇಜಿನ ಏಳಿಗೆಗಾಗಿ ನಡೆಸಿದ ಶ್ರಮ ನಿಸ್ವಾರ್ಥ ಶುದ್ಧ ಚಾರಿತ್ರಿಯ ಮತ್ತು ಶುದ್ಧ ಹಸ್ತ ಇವರ ಯಶಸ್ಸಿನ ಹಿನ್ನೆಲೆಯಾಗಿದೆ. ಕಾರ್ಯದಕ್ಷತೆ, ಪೂರ್ವೋತ್ತರ ಸಾಧಕ-ಬಾಧಕಗಳ ಚಿಂತನೆ, ವ್ಯವಸ್ಥಿತ ಮತ್ತುತ್ಯಾಗಮನೋಭಾವದಿಂದ ಕೂಡಿದ್ದು ಅನ್ಯಾದೃಶವಾಗಿದೆ. ಸಂಸ್ಕೃತ ಕಾಲೇಜೊಂದನ್ನು ಹೇಗೆ ರೂಸಬೇಕು ಎಂಬುದಕ್ಕೆ ಆದರ್ಶ ಪ್ರಾಯರಾದವರು ಲಕ್ಷ್ಮೀನಾರಾಯಣ ಭಟ್ಟರು ಎಂದರು.
ಸನ್ಮಾನವನ್ನು ಸ್ವೀಕರಿಸಿದ ಲಕ್ಷ್ಮೀನಾರಾಯಣ ಭಟ್ಟರು, ಗುರುಗಳ ಸಂಸ್ಕೃತ ತಜ್ಞರ ಸಮ್ಮುಖದಲ್ಲಿ ನಡೆದದ್ದು ಸಮ್ಮಾನವಲ್ಲ ಇದು ನನಗೆ ಮಾಡಿದ ಪರಮಾನುಗ್ರಹ ಎಂದು ತಿಲಿಯುತ್ತೇನೆ. ನಾನು ಸೊನ್ನೆ ಸೊನ್ನೆಯ ಜೊತೆಗೆ ಬೆಂಬಲವಾಗಿ ನಿಂತವರಿ೦ದಾಗಿ ಈ ಸೊನ್ನೆಗೆ ಬಲ ಮತ್ತು ಬೆಲೆ ಬಂದಿತು ಎಂದು ಹೇಳಿದರು.
ಪರ್ಯಾಯಶ್ರೀಪಾದರು ಮತ್ತು ಪಲಿಮಾರು ಮಠಾಧೀಶರು ಲಕ್ಷ್ಮೀನಾರಾಯಣ ಭಟ್ಟ ದಂಪತಿಗಳನ್ನು ಸನ್ಮಾನಿಸಿದರು. ಸನ್ಮಾನಪತ್ರವನ್ನು ಡಾ.ಷಣ್ಮುಖ ಹೆಬ್ಬಾರ್ ವಾಚಿಸಿದರು. ವಿದ್ಯಾರ್ಥಿಗಳಾದ ಮುರಳೀಕೃಷ್ಣ ಶರ್ಮಾ ಮತ್ತು ನಂದಕುಮಾರ