ಮಂಗಳೂರು ಛಾಯಾಗ್ರಾಹಕರಿಂದ ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ,  ಮಂಗಳೂರು ವಲಯ ನಡೆಸಿದ ಯೋಗ ದಿನಾಚರಣೆ. ಪತಂಜಲಿ ಯೋಗ ಪ್ರತಿಷ್ಠಾನದ ಯೋಗ ಗುರುಗಳಾದ ಯೋಗಿಶ್ ಶೆಟ್ಟಿ ಮತ್ತು ಕೌಶಿಕ್ ಶಾನ್ ಇವರು ಯೋಗವನ್ನು ನಡೆಸಿಕೊಟ್ಟರು.  
ಯೋಗ ದಿನಾಚರಣೆ ಆಚರಿಸಲು ಉಚಿತ ಸ್ಥಳ ವ್ಯವಸ್ಥೆ ಮಾಡಿದ ಶ್ರೀಮತಿಯವರ ಪುತ್ರರಾದ ಡಾll ಸತ್ಯ ಕೃಷ್ಣ ಇವರನ್ನು ಗುರುತಿಸಿ ಗೌರವಿಸಲಾಯಿತು. 
ಸ್ಥಾಪಕರಾದ ವಿಠಲ್ ಚೌಟ, ಮಾಜಿ ಜಿಲ್ಲಾಧ್ಯಕ್ಷರಾದ ಜಗನ್ನಾಥ್ ಶೆಟ್ಟಿ, ವಲಯದ ಅಧ್ಯಕ್ಷರಾದ ಸುಧಾಕರ್ ಶೋಕೇಸ್ ಅತಿಥಿಗಳನ್ನು ಗುರುತಿಸಿ ಗೌರವಿಸಿದರು. ಪ್ರದಾನ ಕಾರ್ಯದರ್ಶಿ ಅರ್ಜುನ್ ಶೃಂಗೇರಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಅಧ್ಯಕ್ಷರಾದ ವಸಂತ್ ರಾವ್ ವಂದಿಸಿದರು.
 
 
 
 
 
 
 
 
 
 
 

Leave a Reply