ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಬ್ರಹ್ಮಾವರ ವಲಯದ ವಾರ್ಷಿಕ ಮಹಾಸಭೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಬ್ರಹ್ಮಾವರ ವಲಯದ 21ನೇ ವಾರ್ಷಿಕ ಮಹಾಸಭೆಯು ಪ್ರಕಾಶ್ ಕಾರ್ಕಡ ಇವರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದ ಮದರ್ ಪ್ಯಾಲೇಸ್‍ನಲ್ಲಿ ಜರಗಿತು.

ಎಸ್.ಕೆ.ಪಿ.ಎ ಇದರ ಜಿಲ್ಲಾಧ್ಯಕ್ಷರಾದ ಆನಂದ ಎನ್.ಬಂಟ್ವಾಳ ಇವರು ದೀಪ ಪ್ರಜ್ವಲಿಸುವ ಮೂಲಕ ಮಹಾಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆ ಆಗುವ ಹಾಗೂ ಸದಸ್ಯತ್ವ ನವೀಕರಿಸಲು ಅವಕಾಶ ಕಲ್ಪಿಸಲಾಯಿತು.

ವಾರ್ಷಿಕ ವರದಿಯನ್ನು ಜಿಲ್ಲಾ ಸಂಘಟನ ಕಾರ್ಯದರ್ಶಿಯಾದ ಹೆರಿಕ್ ಡಿ’ಸೋಜಾ ಮಂಡನೆಮಾಡಿದರು. ವಲಯದ ಕೋಶಾಧಿಕಾರಿಯಾದ ಹರೀಶ್ ತೆಕ್ಕಟ್ಟೆ ವಾರ್ಷಿಕ ಲೆಕ್ಕಪತ್ರವನ್ನು ವಾಚಿಸಿದರು. ಮುಂದಿನ ದಿನಗಳಲ್ಲಿ 25ವರ್ಷ ಸತತವಾಗಿ ಸದಸ್ಯತ್ವ ಪಡೆದು 60 ವರ್ಷ ಮೇಲ್ಪಟ್ಟ ಸದಸ್ಯರಿಗೆ ಗೌರವ ಸದಸ್ಯತ್ವ ಕೊಡಲಾಗುವುದು ಹಾಗೂ ಛಾಯಾಸುರಕ್ವಾ ನಿಧಿಯ ಬಗ್ಗೆ ಜಿಲ್ಲಾ ಅಧ್ಯಕ್ಷರು ಮಾಹಿತಿಯನ್ನು ತಿಳಿಸಿದರು.

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ತೇರ್ಗಡೆಯಾದ ವಲಯದ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ವಲಯದ ಸದಸ್ಯರಿಗೆ ಕುಟುಂಬ ಕಾರ್ಯಕ್ರಮದ ಜೊತೆ ಹಲವಾರು ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಸಭಾಧ್ಯಕ್ಷರು ತಿಳಿಸಿದರು.

ದಯಾನಂದ ವಾರಂಬಳ್ಳಿ ಪ್ರಾರ್ಥಿಸಿದರು, ಪ್ರತೀಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಕೆ.ಪಿ.ಎ ಜಿಲ್ಲಾಉಪಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಎಸ್.ಕೆ.ಪಿ.ಎ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ವಾಸುದೇವ ರಾವ್, ಎಸ್.ಕೆ.ಪಿ.ಎ ಬ್ರಹ್ಮಾವರ ವಲಯದ ಗೌರವಾಧ್ಯಕ್ಷರಾದ ಮಾರ್ಷಲ್ ಡಿ’ಸೋಜಾ, ಎಸ್.ಕೆ.ಪಿ.ಎ ವಿವಿದೋದ್ದೇಶ ಸಹಕಾರಿ ಸಂಘದ ನೀರ್ದೆಶಕರಾದ ಸ್ಟೀಫನ್ ಲೂವಿಸ್, ವಲಯದ ಜೊತೆಕಾರ್ಯದರ್ಶಿ ಅರುಣ್ ಸಾಯಿ ಹಾಗೂ ವಲಯದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಾವರ ವಲಯದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುನೀಲ್ ಪಾಂಡೇಶ್ವರ ಧನ್ಯವಾದ ಸಮರ್ಪಣೆ ಮಾಡಿದರು.

 
 
 
 
 
 
 
 
 
 
 

Leave a Reply