ಶ್ರೀಕ್ಷೇತ್ರ ಅಡಪಾಡಿ -“ಅಷ್ಟಮಂಗಲ ಪ್ರಶ್ನಾ ಚಿಂತನೆ”ಗೆ ಚಾಲನೆ

ಶಿರ್ವ:- ಸೂಡ ಸಮೀಪದ ಪಳ್ಳಿ ಕಾರಣಿಕ ಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಕ್ಷೇತ್ರದ ವಾಯುವ್ಯ ಭಾಗದ ಪುರಾತನ ಆಲಡೆ ಶಕ್ತಿ ಸಾನಿಧ್ಯಗಳ ಜೀರ್ಣೋದ್ಧಾರಾಂಗ “ಅಷ್ಟಮಂಗಲ ಪ್ರಶ್ನಾ ಚಿಂತನೆ”ಯು ಶ್ರೀಕ್ಷೇತ್ರದಲ್ಲಿ ಬುಧವಾರ ಪೂರ್ವಾಹ್ನ ವಿದ್ವಾನ್ ನಾರಾಯಣ ನಂಬೂದಿರಿ ತ್ರಿಶೂರ್‌ರವರ ನೇತೃತ್ವದಲ್ಲಿ ನಿಟ್ಟೆ ವೇದಮೂರ್ತಿ ಪ್ರಸನ್ನ ಆಚಾರ್ಯ ಹಾಗೂ ಸಹ ವಿದ್ವಾಂಸರ ಉಪಸ್ಥಿತಿಯಲ್ಲಿ ಪ್ರಾರಂಭಗೊoಡಿತು. ಶ್ರೀಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಶ್ರೀಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ದಯಾನಂದ ಭಟ್ ಕಲ್ಲಡ್ಕ, ಕ್ಷೇತ್ರದ ವೈದಿಕರು, ಕ್ಷೇತ್ರದ ಭಗವದ್ಭಕ್ತರು, ಅಡಪಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು. ಶುಕ್ರವಾರ ಪರ್ಯಂತ ಪ್ರಶ್ನಾ ಚಿಂತನೆ ಮುಂದುವರಿಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

 
 
 
 
 
 
 
 
 

Leave a Reply