ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಜ್ಯೋತಿಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಹಿರಿಯರು ಶ್ರಮದಾಯಕ ಕೆಲಸದ ಜೊತೆಗೆ ಕಾಲಕಾಲಕ್ಕೆ ಬೆಳೆಯುವ ಪ್ರಕೃತಿದತ್ತಆಹಾರ ಸೇವಿಸಿ ಆರೋಗ್ಯಪೂರ್ಣ ಜೇವನವನ್ನು ನಡೆಸಿ ಧೀರ್ಘಾಯುಷಿಗಳಾಗಿ ಬಾಳಿದರು. ಫಾಸ್ಟ್ ಫುಡ್, ಆಧುನಿಕ ಆಹಾರ ಶೈಲಿಯ ಆಹಾರ ಸೇವನೆ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ಬೀರುತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ವಹಿಸಿ ಮಾತನಾಡುತ್ತಾ ನರೇಗಾ ಯೋಜನೆಯ ಮೂಲಕ ಮನೆಗಳಲ್ಲಿ ತರಕಾರಿ ಬೆಳೆಯಲು ಅವಕಾಶವಿದ್ದು ಪ್ರಯೋಜನ ಪಡೆದು ಕೊಳ್ಳು ವಂತೆ ವಿನಂತಿಸಿದರಲ್ಲದೆ, ಗ್ರಾಮದಲ್ಲಿ 95 ಶೇಕಡ ಕೋವಿಡ್ ಲಸಿಕೆ ಪ್ರಗತಿಯಲ್ಲಿದ್ದು, ಪ್ರತೀಯೊಬ್ಬರೂ ಕೋವಿಡ್ ಲಸಿಕೆ ಪಡೆದು ನೂರು ಶೇಕಡ ಸಾಧನೆಗೆ ಸಹಕರಿಸುವಂತೆ ಕರೆಯಿತ್ತರು. ವಾರ್ಡ್ ಸದಸ್ಯರಾದ ಶಶಿಧರ ವಾಗ್ಲೆ, ಹರೀಶ್ ಶೆಟ್ಟಿ ಕಕ್ರಮನೆ, ಪ್ರೇಮಾವೆಂಕಟೇಶ್, ಸಂತೋಷ್ ಕುಲಾಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತಕ್ರಮ ನೆರವೇರಿಸಲಾಯಿತು. ಅಪೌಷ್ಠಿಕತೆ ಇರುವ ಮಕ್ಕಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರಾದ ಶಕುಂತಳಾ ಆಚಾರ್ಯ, ದಿವ್ಯಾ, ಯಶೋದಾ, ಸ್ತ್ರೀಶಕ್ತಿಗುಂಪುಗಳು, ಮಹಿಳೆಯರು ಅದಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಪಿಡಿಒ ವಸಂತಿ ಬಾಯಿ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶೈಲಾ ಪ್ರಾಸ್ತಾವಿಕ ಮಾತು ಗಳೊಂದಿಗೆ ನಿರೂಪಿಸಿದರು. ಮಾನಸ ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಆರ್ ಪೂಜಾರಿ ಪ್ರಾರ್ಥಿಸಿದರು. ಪಡುಬೆಳ್ಳೆ ಅಂಗನವಾಡಿ ಶಿಕ್ಷಕಿ ಜಯಶ್ರೀ ಆಚಾರ್ಯ ಧನ್ಯವಾದವಿತ್ತರು